ವಿಧಾನ ಪರಿಷತ್ತಿನಲ್ಲಿ ಇಂದು ಶ್ರೀ ಎಂ.ವಿ. ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಶ್ರೀ ಎನ್. ಹುಚ್ಚ ಮಾಸ್ತಿ ಗೌಡ ಅವರು, ‘ಕೇಂದ್ರ ಸಮಿತಿಯ ಶಿಫಾರಸುಗಳಲ್ಲಿ ಭೂ ಸುಧಾರಣೆಗೆ ಸಂಬಂಧಿಸಿದಂತೆ ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮೂರು ಮಂದಿ ಅಪ್ರಾಯಸ್ಥ ಮಕ್ಕಳು ಎಂದು ವಿವರಣೆ ನೀಡಲಾಗಿದೆ. ಅದಕ್ಕಿಂತ ಹೆಚ್ಚು ಜನ ಇದ್ದರೆ ಆ ಕುಟುಂಬಕ್ಕೆ ಭೂ ಮಿತಿಯ ಎರಡರಷ್ಟು ಜಮೀನನ್ನು ಒದಗಿಸಬಹುದೆಂದು ಸೂಚಿಸಲಾಗಿದೆ’ ಎಂದರು.