ನಗರ ಆಸ್ತಿ ಮಾರಾಟಕ್ಕೆ ನಿಷೇಧ: ಶೀಘ್ರವೇ ರಾಜ್ಯದಲ್ಲಿ ಸುಗ್ರೀವಾಜ್ಞೆ?
ಬೆಂಗಳೂರು, ಜುಲೈ 24– ನಗರ ಆಸ್ತಿಗಳ ಮಾರಾಟ ವ್ಯವಹಾರಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಸಾಧ್ಯತೆ ಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.
ಭೂ ಮಿತಿ ಕುರಿತ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಿ, ದೆಹಲಿಯಿಂದ ಇಂದು ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಈ ವಿಷಯವನ್ನು ತಮ್ಮನ್ನು ಭೇಟಿಯಾದ ವರದಿಗಾರರಿಗೆ ತಿಳಿಸಿದರು.
ಈ ವರ್ಷದ ಅಂತ್ಯದೊಳಗೆ ನಗರ ಆಸ್ತಿ ಪರಿಮಿತಿ ಬಗ್ಗೆ ಅಂತಿಮ ಸಲಹೆಗಳ ನಿರ್ಧಾರವಾಗಬೇಕು ಎಂದು ತಾವು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಅವರು ಹೇಳಿದರು.