ಇಂದೋರ್, ಜ. 7– ಭಾರತಕ್ಕೆ ಕೇಡು ಹಾರೈಸುವ ಹಾಗೂ ಭಾರತ– ಬಾಂಗ್ಲಾ ದೇಶಗಳ ಮಧ್ಯೆ ಭಿನ್ನಾಭಿಪ್ರಾಯ ತರಲು ಅಂತರರಾಷ್ಟ್ರೀಯ ವಲಯಗಳಲ್ಲಿ ನಡೆದಿರುವ ಯತ್ನಗಳನ್ನು ಲೆಕ್ಕಿಸದೆ, ಶಾಂತಿ, ಪ್ರಜಾಸತ್ತೆ ಹಾಗೂ ಜಾತ್ಯತೀತತೆಯ ನೀತಿಗಳನ್ನು ಭಾರತ ಮುಂದುವರಿಸಿಕೊಂಡು ಹೋಗುವುದು ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಘೋಷಿಸಿದರು.