ನವದೆಹಲಿ, ಫೆ. 21 (ಯುಎನ್ಐ)– ಹವಾಲಾ ಹಗರಣದ ಸಂಬಂಧ ಜೈನ್ ಡೈರಿಯಲ್ಲಿ ಉಲ್ಲೇಖಿತ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಪಾತ್ರದ ಕುರಿತಾಗಿ ತನಿಖೆ ನಡೆಸಿದ ಸಿಬಿಐ, ನಾಳೆ ತನಿಖೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟಿಗೆ ತಿಳಿಸಲಿದೆ. ಈ ಮಧ್ಯೆ ನಗರಾಭಿವೃದ್ಧಿ ರಾಜ್ಯ ಸಚಿವ ಆರ್.ಕೆ.ಧವನ್, ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.