<p><strong>ತೆಹಲ್ಕಾ: ಹುಬ್ಬಳ್ಳಿ–ಧಾರವಾಡದಲ್ಲಿ ರ್ಯಾಲಿ</strong></p>.<p>ಹುಬ್ಬಳ್ಳಿ, ಏ. 8– ತೆಹಲ್ಕಾ ಚಿತ್ರ ಸುರುಳಿ ಬಯಲಿಗೆ ತಂದ ರಕ್ಷಣಾ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಇಂದು ಪ್ರತ್ಯೇಕ ರ್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಬಯಲಿಗೆ ಬಂದಂತಾಗಿದೆ.</p>.<p>ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಪ್ರತಿನಿಧಿಯಾಗಿ ಸಚಿವ ಡಿ.ಬಿ. ಇನಾಂದಾರ್ ಹುಬ್ಬಳ್ಳಿಯ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದು ಕೆಪಿಸಿಸಿ ನೇತೃತ್ವದಲ್ಲಿ ನಡೆದ ಅಧಿಕೃತ ರ್ಯಾಲಿ ಎಂದು ಶಾಸಕರಾದ ಜಬ್ಬಾರ್ ಖಾನ್ ಹೊನ್ನಾಳಿ, ಸಿ.ಎಸ್. ಶಿವಳ್ಳಿ, ಶಿವಾನಂದ ಅಂಬಡಗಟ್ಟಿ, ಕೆ.ಎನ್. ಗಡ್ಡಿ ಮತ್ತು ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಹೇಳಿದ್ದಾರೆ.</p>.<p><strong>ವಿಶ್ವಕಪ್ ಏಷ್ಯಾ ವಲಯ ಫುಟ್ಬಾಲ್: ಯುಎಇ ವಿರುದ್ಧ ಭಾರತಕ್ಕೆ ಜಯ</strong></p>.<p>ಬೆಂಗಳೂರು, ಏ. 8– ಭಾರತದ ಆಟಗಾರರು ಕೊನೆಗೂ ‘ಪವಾಡ’ ನಡೆಸಿಯೇ ಬಿಟ್ಟರು. ವಿಶ್ವಕಪ್ ಫುಟ್ ಬಾಲ್ ಏಷ್ಯಾ ವಲಯದ ಮೊದಲ ಅರ್ಹತಾ ಸುತ್ತಿನ 8ನೇ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಆಲ್ಬರ್ಟೊ ಜೂಲ್ಸ್ ಕ್ಲಾಡಿಯೊ ತಂದಿತ್ತ ಪಂದ್ಯದ ಏಕೈಕ ಗೋಲಿನಿಂದ ಸೋಲಿಸಿದ ಭಾರತ ಅನಿರೀಕ್ಷಿತ ಫಲಿತಾಂಶ ಒದಗಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಹಲ್ಕಾ: ಹುಬ್ಬಳ್ಳಿ–ಧಾರವಾಡದಲ್ಲಿ ರ್ಯಾಲಿ</strong></p>.<p>ಹುಬ್ಬಳ್ಳಿ, ಏ. 8– ತೆಹಲ್ಕಾ ಚಿತ್ರ ಸುರುಳಿ ಬಯಲಿಗೆ ತಂದ ರಕ್ಷಣಾ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಇಂದು ಪ್ರತ್ಯೇಕ ರ್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಬಯಲಿಗೆ ಬಂದಂತಾಗಿದೆ.</p>.<p>ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಪ್ರತಿನಿಧಿಯಾಗಿ ಸಚಿವ ಡಿ.ಬಿ. ಇನಾಂದಾರ್ ಹುಬ್ಬಳ್ಳಿಯ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದು ಕೆಪಿಸಿಸಿ ನೇತೃತ್ವದಲ್ಲಿ ನಡೆದ ಅಧಿಕೃತ ರ್ಯಾಲಿ ಎಂದು ಶಾಸಕರಾದ ಜಬ್ಬಾರ್ ಖಾನ್ ಹೊನ್ನಾಳಿ, ಸಿ.ಎಸ್. ಶಿವಳ್ಳಿ, ಶಿವಾನಂದ ಅಂಬಡಗಟ್ಟಿ, ಕೆ.ಎನ್. ಗಡ್ಡಿ ಮತ್ತು ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಹೇಳಿದ್ದಾರೆ.</p>.<p><strong>ವಿಶ್ವಕಪ್ ಏಷ್ಯಾ ವಲಯ ಫುಟ್ಬಾಲ್: ಯುಎಇ ವಿರುದ್ಧ ಭಾರತಕ್ಕೆ ಜಯ</strong></p>.<p>ಬೆಂಗಳೂರು, ಏ. 8– ಭಾರತದ ಆಟಗಾರರು ಕೊನೆಗೂ ‘ಪವಾಡ’ ನಡೆಸಿಯೇ ಬಿಟ್ಟರು. ವಿಶ್ವಕಪ್ ಫುಟ್ ಬಾಲ್ ಏಷ್ಯಾ ವಲಯದ ಮೊದಲ ಅರ್ಹತಾ ಸುತ್ತಿನ 8ನೇ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಆಲ್ಬರ್ಟೊ ಜೂಲ್ಸ್ ಕ್ಲಾಡಿಯೊ ತಂದಿತ್ತ ಪಂದ್ಯದ ಏಕೈಕ ಗೋಲಿನಿಂದ ಸೋಲಿಸಿದ ಭಾರತ ಅನಿರೀಕ್ಷಿತ ಫಲಿತಾಂಶ ಒದಗಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>