<h2>7 ಮಂದಿ ಕಾಂಗ್ರೆಸ್ಸಿಗರ ಭೀಕರ ಕೊಲೆ</h2>.<p><strong>ಗುಂಟೂರು, ಮಾರ್ಚ್ 10 (ಯುಎನ್ಐ)–</strong> ಆಂಧ್ರಪ್ರದೇಶದಲ್ಲಿ ಈಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರಾಜಕೀಯ ಹಿಂಸಾಚಾರವೊಂದರಲ್ಲಿ ಶಂಕಿತ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರು ಇಂದು ಗುಂಟೂರು ಜಿಲ್ಲೆಯ ದುರ್ಗಿ ಪೊಲೀಸ್ ಠಾಣೆ ಸಮೀಪ ಏಳು ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.</p>.<p>ಘಟನೆಯಲ್ಲಿ ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಬ್ಬರು ಮಾತ್ರ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.</p>.<h2>ಕಂಬಾಲಪಲ್ಲಿ ದುರ್ಘಟನೆಗೆ ಒಂದು ವರ್ಷ</h2>.<p><strong>ಕೋಲಾರ, ಮಾರ್ಚ್ 10–</strong> ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ದಲಿತರ ದ್ವೇಷಕ್ಕೆ ಒಬ್ಬ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸವರ್ಣೀಯರ ಆಕ್ರೋಶಕ್ಕೆ ಏಳು ಜನ ದಲಿತರು ಸಜೀವದಹಿಸಿ ಸುಟ್ಟುಹೋದ ಪ್ರಕರಣದ ನಡೆದು ಇಂದಿಗೆ ವರ್ಷ ತುಂಬಿದೆ.</p>.<p>ಕಳೆದ 2000ರ ಮಾರ್ಚ್ 11ರಂದು ಸಂಭವಿಸಿದ ಈ ಅಮಾನವೀಯ ಘಟನೆಯಿಂದಾಗಿ ಇಡೀ ರಾಷ್ಟ್ರವೇ ತಲೆತಗ್ಗಿಸುವಂತಾಗಿ ರಾಷ್ಟ್ರದ ಇತಿಹಾಸದಲ್ಲಿ ಇದೊಂದು ಕರಾಳ ಛಾಯೆ ಮೂಡಿಸಿತ್ತು.</p>.<p>ದಲಿತರ ಮಾರಣಹೋಮ ನಡೆದುಹೋದ ಹಿನ್ನೆಲೆಯಲ್ಲಿ ಇಡೀ ವಿಶ್ವದ ಗಮನವನ್ನು ಕಂಬಾಲಪಲ್ಲಿ ಸೆಳೆದಿತ್ತು. ಅಲ್ಲಿ ನೆಲೆಸಿದ್ದ ಸ್ಮಶಾನ ಮೌನದ ಕಾರ್ಮೋಡಗಳು ನಿಧಾನವಾಗಿ ಸರಿಯುತ್ತಲಿವೆಯಾದರೂ ಊರಿನ ಈಶಾನ್ಯ ದಿಕ್ಕಿನಲ್ಲಿ ತಲೆತಲೆಮಾರುಗಳಿಂದ ವಾಸ್ತವ್ಯ ಹೂಡಿದ್ದ ದಲಿತರು ಮನೆಗಳನ್ನು ಖಾಲಿ ಮಾಡಿಕೊಂಡು ಚಿಂತಾಮಣಿಗೆ ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>7 ಮಂದಿ ಕಾಂಗ್ರೆಸ್ಸಿಗರ ಭೀಕರ ಕೊಲೆ</h2>.<p><strong>ಗುಂಟೂರು, ಮಾರ್ಚ್ 10 (ಯುಎನ್ಐ)–</strong> ಆಂಧ್ರಪ್ರದೇಶದಲ್ಲಿ ಈಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರಾಜಕೀಯ ಹಿಂಸಾಚಾರವೊಂದರಲ್ಲಿ ಶಂಕಿತ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರು ಇಂದು ಗುಂಟೂರು ಜಿಲ್ಲೆಯ ದುರ್ಗಿ ಪೊಲೀಸ್ ಠಾಣೆ ಸಮೀಪ ಏಳು ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.</p>.<p>ಘಟನೆಯಲ್ಲಿ ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಬ್ಬರು ಮಾತ್ರ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.</p>.<h2>ಕಂಬಾಲಪಲ್ಲಿ ದುರ್ಘಟನೆಗೆ ಒಂದು ವರ್ಷ</h2>.<p><strong>ಕೋಲಾರ, ಮಾರ್ಚ್ 10–</strong> ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ದಲಿತರ ದ್ವೇಷಕ್ಕೆ ಒಬ್ಬ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸವರ್ಣೀಯರ ಆಕ್ರೋಶಕ್ಕೆ ಏಳು ಜನ ದಲಿತರು ಸಜೀವದಹಿಸಿ ಸುಟ್ಟುಹೋದ ಪ್ರಕರಣದ ನಡೆದು ಇಂದಿಗೆ ವರ್ಷ ತುಂಬಿದೆ.</p>.<p>ಕಳೆದ 2000ರ ಮಾರ್ಚ್ 11ರಂದು ಸಂಭವಿಸಿದ ಈ ಅಮಾನವೀಯ ಘಟನೆಯಿಂದಾಗಿ ಇಡೀ ರಾಷ್ಟ್ರವೇ ತಲೆತಗ್ಗಿಸುವಂತಾಗಿ ರಾಷ್ಟ್ರದ ಇತಿಹಾಸದಲ್ಲಿ ಇದೊಂದು ಕರಾಳ ಛಾಯೆ ಮೂಡಿಸಿತ್ತು.</p>.<p>ದಲಿತರ ಮಾರಣಹೋಮ ನಡೆದುಹೋದ ಹಿನ್ನೆಲೆಯಲ್ಲಿ ಇಡೀ ವಿಶ್ವದ ಗಮನವನ್ನು ಕಂಬಾಲಪಲ್ಲಿ ಸೆಳೆದಿತ್ತು. ಅಲ್ಲಿ ನೆಲೆಸಿದ್ದ ಸ್ಮಶಾನ ಮೌನದ ಕಾರ್ಮೋಡಗಳು ನಿಧಾನವಾಗಿ ಸರಿಯುತ್ತಲಿವೆಯಾದರೂ ಊರಿನ ಈಶಾನ್ಯ ದಿಕ್ಕಿನಲ್ಲಿ ತಲೆತಲೆಮಾರುಗಳಿಂದ ವಾಸ್ತವ್ಯ ಹೂಡಿದ್ದ ದಲಿತರು ಮನೆಗಳನ್ನು ಖಾಲಿ ಮಾಡಿಕೊಂಡು ಚಿಂತಾಮಣಿಗೆ ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>