ನೇಪಾಳದ ಹಿಂದುಳಿದ ಮಾದೇಶ್ ಪ್ರಾಂತ್ಯಕ್ಕೆ ಸೇರಿದ ಬೌದ್ಧ ಧರ್ಮದ ದಂಪತಿಯ ಮಗ ಬಾಲೇಂದ್ರ. ಅವರ ತಂದೆ ಪಾರಂಪರಿಕ ಪದ್ಧತಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು. ಚಿಕ್ಕಂದಿನಲ್ಲಿ ಚುರುಕುತನದಿಂದ ಕೂಡಿದ್ದ ಅವರಿಗೆ ಕವನ ಬರೆಯುವುದು ತಂದೆಯಿಂದ ಬಂದ ಬಳುವಳಿ. ಕಾಠ್ಮುಂಡಿವಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ ಅವರು, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.