<p>ಎಸ್.ಆರ್. ರಾಮಸ್ವಾಮಿ ನನ್ನ ಬದುಕಿಗೆ ಮಹಾ ತಿರುವನ್ನು ಕೊಟ್ಟ ಮಹಾನುಭಾವ. </p><p><strong>ಅದರ ಕತೆ ಹೀಗಿದೆ:</strong></p><p>ನಾನು ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಎಮ್ಎಸ್ಸಿ ವಿದ್ಯಾರ್ಥಿಗಳಿಗೆ ಪರಿಸರ ವಿಜ್ಞಾನದ ಪಾಠ ಹೇಳುತ್ತಿದ್ದೆ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ; ನನಗೆ ಹಿಂದಿ ಅಷ್ಟಾಗಿ ಗೊತ್ತಿರಲಿಲ್ಲ. </p><p>ಹೇಗೋ ಒದ್ದಾಡುತ್ತಿದ್ದಾಗ ಬೆಂಗಳೂರಿನ ‘ಉತ್ಥಾನ’ ಪತ್ರಿಕೆಯ ಸಂಪಾದಕರಿಂದ ನನಗೊಂದು ಪತ್ರ ಬಂತು, ‘ಒಂದು ಲೇಖನ ಕೊಡಿ’ ಅಂತ. ಯುವ ಬರೆಹಗಾರನಿಂದ ಸಂಪಾದಕರೇ ಲೇಖನ ಕೇಳಿದ್ದಾರೆಂದರೆ ಅದು ಸಂಭ್ರಮದ ಸಂಗತಿಯಾಗಿತ್ತು. </p><p>ಎರಡೇ ದಿನಗಳಲ್ಲಿ ‘ನದಿ ನೀರಿಗೆ ವಿಷಪ್ರಾಶನ’ ಹೆಸರಿನ ಲೇಖನ ಬರೆದು, ಅದಕ್ಕೊಂದೆರಡು ಚಿತ್ರಗಳನ್ನೂ ಬರೆದು ಅಂಚೆಗೆ ಹಾಕಿದೆ. [ಮುಂದೆ ಅದೇ ಲೇಖನ ಕನ್ನಡ ಏಳನೆಯ ತರಗತಿಯ ಪಠ್ಯದಲ್ಲಿ ಸೇರಿತು, ಆ ಮಾತು ಬೇರೆ] </p><p>‘ಉತ್ಥಾನʼ ಸಂಪಾದಕರ ಆ ಪತ್ರ ನನ್ನ ಬದುಕಿನ ದಾರಿಯನ್ನೇ ಬದಲಿಸುವಷ್ಟು ಚೇತೋಹಾರಿ ಆಗಿತ್ತೆಂದು ಈಗ ಅನ್ನಿಸುತ್ತಿದೆ. </p><p>ಏಕೆಂದರೆ, ’ಸುಧಾ‘ ಪತ್ರಿಕೆಯಲ್ಲಿ ನನ್ನ ಲೇಖನಗಳು ಪ್ರಕಟವಾಗುತ್ತಿದ್ದವು. ಈಗ ಉತ್ಥಾನವೂ ನನ್ನನ್ನು ಗುರುತಿಸಿದ್ದರಿಂದ ನಾನು ಉಪನ್ಯಾಸಕ ವೃತ್ತಿ ಬಿಟ್ಟು ಪತ್ರಕರ್ತ/ ಬರಹಗಾರ ಆದರೂ ಆಗಬಹುದು ಎಂಬ ಸಣ್ಣ ಭರವಸೆ ನನ್ನಲ್ಲಿ ಮೊಳೆಯತೊಡಗಿತ್ತು. </p><p>ಅದೇ ದಿನಗಳಲ್ಲಿ ‘ಉಪಸಂಪಾದಕರು ಬೇಕಾಗಿದ್ದಾರೆʼ ಎಂಬ ಪುಟ್ಟ ಜಾಹೀರಾತು ‘ಸುಧಾʼದಲ್ಲಿ ಕಾಣಿಸಿಕೊಂಡಿತು. ನೋಡೋಣವೆಂದು ನಾನು ಅರ್ಜಿ ಹಾಕಿದೆ. ಪತ್ರಕರ್ತನಾಗಿಬಿಟ್ಟೆ. ನೈನಿತಾಲನ್ನು ಬಿಟ್ಟೆ. </p><p>ನಂತರ ತಿಳಿದುಬಂದ ಅಚ್ಚರಿಯ ಸಂಗತಿ ಏನೆಂದರೆ, ಶ್ರೀಯುತ ಎಸ್.ಆರ್. ರಾಮಸ್ವಾಮಿಯವರು ‘ಸುಧಾʼ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದವರು ರಾಜೀನಾಮೆ ಕೊಟ್ಟಿದ್ದರಿಂದಲೇ ಆ ಹುದ್ದೆ ಖಾಲಿಯಾಗಿ, ಅದೇ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿತ್ತು.</p>.ಪತ್ರಕರ್ತ, ಸಾಹಿತಿ, ಪರಿಸರವಾದಿಯೂ ಆಗಿದ್ದರು ವಿದ್ವಾಂಸ ಎಸ್.ಆರ್. ರಾಮಸ್ವಾಮಿ. <p>ಅದು ನನಗಾಗಿಯೇ ಸೃಷ್ಟಿಯಾಗಿದೆಯೊ ಎಂಬಂತಿತ್ತು. ಏಕೆಂದರೆ ‘ಸುಧಾʼ ಬಿಟ್ಟರೆ ನನಗೆ ನೈನಿತಾಲ್ನಲ್ಲಿ ಬೇರೆ ಯಾವುದೇ ಕನ್ನಡ ಪತ್ರಿಕೆ ಸಿಗುತ್ತಿರಲಿಲ್ಲ. ಪ್ರಜಾವಾಣಿ ಅಥವಾ ಬೇರೆ ಯಾವುದೇ ಪತ್ರಿಕೆಯಲ್ಲಿ ಜಾಹೀರಾತು ಬಂದಿದ್ದರೂ ನನ್ನ ಗಮನಕ್ಕೆ ಅದು ಬರುತ್ತಿರಲಿಲ್ಲ. ನಾನು ಪತ್ರಕರ್ತ ಆಗುತ್ತಿರಲೂ ಇಲ್ಲ. </p><p>ಈಗ ಹಿಂದಿರುಗಿ ನೋಡಿದರೆ, ಅವರು ಬಿಟ್ಟು ಹೋದ ದೋಣಿಯನ್ನು ನಾನು ಏರಿದೆ ಅಂತ ಅನ್ನಿಸುತ್ತಿದೆ. ಅಷ್ಟೇ ಆಗಿದ್ದರೆ ನಾನು ಈ ಲೇಖನವನ್ನು ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಅದು ಆರಂಭವಾಗಿತ್ತಷ್ಟೆ.</p><p>ಪತ್ರಕರ್ತನಾಗಿ ಬೆಂಗಳೂರಿಗೆ ಬಂದ ಮೇಲೆ ನಾನು ‘ಉತ್ಥಾನʼ ಸಂಪಾದಕರಿಗೆ ಧನ್ಯವಾದ ಹೇಳಲೆಂದು ‘ಕೇಶವ ಕೃಪಾʼಕ್ಕೆ ಹೋದೆ. ಈಗಿನಂತೆ ಅಂದು ಅದು ಅಷ್ಟೇನೂ ಭವ್ಯ ಕಟ್ಟಡವಾಗಿರಲಿಲ್ಲ. ಎಷ್ಟೋ ವರ್ಷಗಳಿಂದ ಪರಿಚಿತ ಎಂಬಂತೆ ಅವರು ನನ್ನನ್ನು ಎದುರು ಕೂರಿಸಿ, ನನ್ನದೇ ಅದುವರೆಗಿನ ಬರಹಗಳನ್ನು ಅವರು ಚರ್ಚಿಸಿದ್ದು ನನಗಿನ್ನೂ ನೆನಪಿದೆ. </p><p>ತನ್ನ ಬಗ್ಗೆ ಹೇಳಿಕೊಳ್ಳುವ ಬದಲು ತನ್ನೆದುರು ಕೂತವರ ಗುಣವಿಶೇಷಗಳನ್ನು ಬಣ್ಣಿಸಬಲ್ಲವರು ಅಪರೂಪ. ಅಂಥವರು ಯಾರಿಗಾದರೂ ಇಷ್ಟವಾಗುತ್ತಾರೆ ತಾನೆ?</p><p>ನನಗೆ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ತಾನು ಹಿಂದೆ ‘ಸುಧಾʼದಲ್ಲಿದ್ದೆ ಎಂಬುದನ್ನಾಗಲೀ ತಾನು ಡಿವಿಜಿಯವರ ಸನ್ನಿಧಾನದಲ್ಲಿ, ಅವರ ಸೆಕ್ರೆಟರಿಯಾಗಿ ಕೆಲಸ ಮಾಡಿದ್ದೆ ಎಂಬುದನ್ನಾಗಲೀ ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. </p><p>ಬದಲಿಗೆ, ನನಗೆ ಇಷ್ಟವಾಗಬಹುದಾದ ವಿಷಯಗಳ ಬಗ್ಗೆ (ಅಂದರೆ ದೊಡ್ಡ ಅಣೆಕಟ್ಟುಗಳಿಂದಾಗುವ ಧ್ವಂಸಕಾರ್ಯದ ಬಗ್ಗೆ, ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯ ಅಧ್ವಾನಗಳ ಬಗ್ಗೆ ಮೆಲುದನಿಯಲ್ಲಿ ತಮ್ಮದೇ ಸ್ವಗತವೆಂಬಂತೆ) ಮಾತಾಡಿದರು. ಮಧ್ಯೆ ಮಧ್ಯೆ ಎದ್ದು ಹೋಗಿ ತಮ್ಮ ಹಿಂಬದಿಯ ಕಪಾಟಿನಿಂದ ಕೆಲವು ಲೇಖನಗಳನ್ನು, ಪ್ರೆಸ್ ಕ್ಲಿಪಿಂಗ್ಗಳನ್ನು ಹೆಕ್ಕಿ, ‘ನಿಮಗೇನಾದರೂ ಇದು ಉಪಯುಕ್ತ ಆಗಬಹುದು, ಇಟ್ಕೊಳ್ಳಿʼ ಎನ್ನುತ್ತ ಕೊಟ್ಟರು. ರಸ್ತೆಯವರೆಗೂ ಬಂದು ಬೀಳ್ಕೊಟ್ಟರು.</p><p>ಬೆಂಗಳೂರಿನಲ್ಲಿ ಮೊದಲ ಬಾರಿ ನನಗೊಬ್ಬ ಗೆಳೆಯ, ಹಿರಿಯ ಹಿತೈಷಿ ಸಿಕ್ಕಂತೆನಿಸಿತ್ತು. ಅದೂ ಆರಂಭವಷ್ಟೆ. ಮುಂದೆ ಆಗಾಗ ಅವರೇ ನನ್ನ ಭೇಟಿಗೆ ಬರುತ್ತಿದ್ದರು ರಿಚ್ಮಂಡ್ ರಸ್ತೆಯ ಶಾನಭಾಗ್ ಹೊಟೆಲ್ನಲ್ಲೊ, ವಿಕ್ಟೋರಿಯಾದಲ್ಲೋ ಯುಟಿಲಿಟಿ ಕಟ್ಟಡದ ಬಳಿಯ ಮೋಬೋಸ್ ಹೊಟೆಲ್ನಲ್ಲೋ ಕೂತು ರಾತ್ರಿ ಎಂಟರವರೆಗೂ ಚಿಂತನಗೋಷ್ಠಿ ನಡೆಸುತ್ತಿದ್ದೆವು. </p><p>ಮಾಮೂಲಿನಂತೆ, ನನಗಿಂತ ಅವರೇ ಹೆಚ್ಚು ಮಾತಾಡುತ್ತಿದ್ದರು. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯ ಇತ್ಯಾದಿಗಳ ಬಗ್ಗೆ ಅವರು ಹೇಳುತ್ತಿದ್ದರು. ಕರ್ನಾಟಕದಿಂದ ದಶಕಗಳ ಕಾಲ ದೂರವಿದ್ದ ನನಗೆ ಅದೊಂದು ಬಗೆಯ ಟ್ಯೂಶನ್ ಪಾಠವೇ ಆಗಿರುತ್ತಿತ್ತು. ಅದು ಎಂದೂ ನೀರಸ ಪಾಠ ಆಗಿರುತ್ತಿರಲಿಲ್ಲ. ಅವರಿಗೇ ಕೇಳಿಸದಷ್ಟು ಸಣ್ಣ ದನಿಯಲ್ಲಿ ಅವರು ಮಧ್ಯೆ ಮಧ್ಯೆ ಜೋಕ್ಗಳನ್ನು ಹೇಳುತ್ತಿದ್ದರು. ಅದೆಷ್ಟೊಂದು ಹಾಸ್ಯ ಪ್ರಸಂಗಗಳು ಅವರಿಗೆ ಅದೆಲ್ಲಿಂದ ನೆನಪಾಗುತ್ತಿದ್ದವೊ ನನಗೆ ಅಚ್ಚರಿಯಾಗುತ್ತಿತ್ತು. </p><p>ಅವುಗಳ ಮಧ್ಯೆ, ನನಗೆಂದೇ ಅವರು ಹೆಕ್ಕಿ ತರುತ್ತಿದ್ದ ಪುಸ್ತಕಗಳು, ಟಿಪ್ಪಣಿಗಳು, ಪಾಂಫ್ಲೆಟ್ಗಳು ಅವರ ಜೋಳಿಗೆಯಿಂದ ನನ್ನ ಚೀಲಕ್ಕೆ ಸೇರುತ್ತಿದ್ದವು. ಅವೆಲ್ಲ ಹೆಚ್ಚಿನದಾಗಿ ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ, ಆರ್ಥಿಕ ಚಿಂತನೆಗಳ ಬಗ್ಗೆ ಹಾಗೂ ಅಭಿವೃದ್ಧಿಯ ಧೋರಣೆಗಳ ಬಗೆಗಿನ ಸಾಹಿತ್ಯವೇ ಆಗಿರುತ್ತಿತ್ತು. ಅವುಗಳನ್ನು ನನಗೆ ಹಸ್ತಾಂತರಿಸುತ್ತ, ‘ನೋಡಿ, ಸಾಧ್ಯವಾದರೆ ಇದರ ಬಗ್ಗೆ ಬರೆಯಿರಿʼ ಎಂದು ಸೂಚನೆ ಅವರಿಂದ ಬಂತೆಂದರೆ ನಮ್ಮಿಬ್ಬರ ಅಂದಿನ ಸಭೆ ಮುಕ್ತಾಯದ ಹಂತಕ್ಕೆ ಬಂತೆಂಬ ಸೂಚನೆ ನನಗೆ ಸಿಗುತ್ತಿತ್ತು. </p><p>ತಾನು ಬಿಟ್ಟು ಬಂದ ದೋಣಿಯಲ್ಲಿ ಮುಂದೆ ಸಾಗುವವನಿಗೆ ದೋಣಿ ನಡೆಯಬೇಕಾದ ದಿಕ್ಕನ್ನೂ, ನಡೆಸುವ ಕಲೆಯನ್ನೂ ಅವರು ನನಗೆ ಹೇಳಿದಂತೆನಿಸುತ್ತಿತ್ತು.</p><p><strong>ಎರಡು ‘ಎಸ್ಸಾರ್ʼಗಳ ನಡುವೆ ಒಂದಿಷ್ಟು ಒಡನಾಟ :</strong> </p><p>ಎಂಭತ್ತರ ದಶಕವೆಂದರೆ ಕರ್ನಾಟಕದಲ್ಲಿ ನಾನಾ ಬಗೆಯ ಚಳವಳಿಗಳ ಉಚ್ಛ್ರಾಯ ಕಾಲವೇ ಆಗಿತ್ತು. ರೈತ ಚಳವಳಿ, ಕಾರ್ಮಿಕ ಚಳವಳಿ, ಗ್ರಾಹಕ ಚಳವಳಿ, ವಿದ್ಯಾರ್ಥಿ ಚಳವಳಿ, ಮಹಿಳಾ ಚಳವಳಿ, ದಲಿತ ಚಳವಳಿ ಅವೆಲ್ಲವುಗಳ ಮಧ್ಯೆ ಹೊಸದಾಗಿ ಪರಿಸರ ಚಳವಳಿ ಕೂಡ ಸೇರಿಕೊಂಡಿತ್ತು. ನಾಡಿನಾದ್ಯಂತ ಹರಡಿಕೊಂಡಿದ್ದ ಸ್ವಯಂಸೇವಾ ಸಂಸ್ಥೆಗಳೆಲ್ಲ ಒಂದುಗೂಡಿ ‘ಫೆವಾರ್ಡ್ -ಕೆʼ ಹೆಸರಿನ ಒಕ್ಕೂಟವನ್ನು ರಚಿಸಿಕೊಂಡು ಆಗಾಗ ಸಭೆ ಸೇರಿ ಮುಂದಿನ ಪರಿಸರ ಚಳವಳಿಯ ಕಾರ್ಯಕ್ರಮವನ್ನು ರೂಪಿಸುತ್ತಿದ್ದವು. ಅದಕ್ಕೆ ಬೇಕಾದ ಸಾಹಿತ್ಯವನ್ನು, ಕರಪತ್ರವನ್ನು ರಚಿಸುವ ಕೆಲಸ ಆಗಾಗ ನನ್ನ ಪಾಲಿಗೆ ಬರುತ್ತಿತ್ತು. ನನಗೆ ಬೇಕಿದ್ದ ಆಕರ ಸಾಹಿತ್ಯವನ್ನು, ಅಂಕಿ ಅಂಶಗಳನ್ನು ಅದೆಲ್ಲಿಂದಲೋ ರಾಮಸ್ವಾಮಿಯವರೇ ಸಂಗ್ರಹಿಸಿ ಕೊಡುತ್ತಿದ್ದರು. </p><p>ಎಸ್ಸಾರ್ ರಾಮಸ್ವಾಮಿ ಒಂದು ಕಡೆ, ಎಸ್ಸಾರ್ ಹಿರೇಮಠ ಒಂದು ಕಡೆ. ಅದೆಷ್ಟೊ ಬಾರಿ ಹೋರಾಟಗಳ ಮುಂಚೂಣಿಯಲ್ಲಿ ಹಿರೇಮಠರು; ಬಹುತೇಕ ಎಲ್ಲ ಬಾರಿ ನೇಪಥ್ಯದಲ್ಲಿ ರಾಮಸ್ವಾಮಿ ಇರುತ್ತಿದ್ದರು. ನಡುನಡುವೆ ‘ಸ್ನೇಹಕುಂಜʼದ ಡಾ. ಕುಸುಮಾ ಸೊರಬ, ಹುಣಸೂರಿನ ಡೀಡ್ ಸಂಸ್ಥೆಯ ಶ್ರೀಕಾಂತ್, ಬೆಂಗಳೂರಿನ ಆಕ್ಸ್ಫಾಮ್ ಸಂಸ್ಥೆಯ ಜೆರ್ರಿ ಪಯಾಸ್, ಬಿಳಿಗಿರಿ ರಂಗನ ಬೆಟ್ಟದ ಡಾ. ಎಚ್ ಸುದರ್ಶನ್, ಸೇಂಟ್ ಜೋಸೆಫ್ಸ್ ಕಾಲೇಜಿನ ಡಾ. ಥೆಲ್ಮಾ ಮತ್ತು ಡಾ. ರವಿ ನಾರಾಯಣ, ಅಪರೂಪಕ್ಕೆ ಲಿಯೊ ಸಾಲ್ಡಾನ್ಹಾ, ಸುರೇಶ್ ಹೆಬ್ಳೀಕರ್ ಮುಂತಾದವರೂ ಸೇರಿಕೊಳ್ಳತೊಡಗಿದ್ದರು.</p><p>ಹರಿಹರ ಪಾಲಿಫೈಬರ್ಸ್ ವಿರುದ್ಧ ಚಳವಳಿ, ನೀಲಗಿರಿ ವಿರುದ್ಧದ ಚಳವಳಿ, ಬಿಸಗೋಡಿನ ಮ್ಯಾಂಗನೀಸ್ ಗಣಿಗಾರಿಕೆಯ ಹೋರಾಟ, ಶರಾವತಿ ಟೇಲ್ರೇಸ್, ಕೈಗಾ ವಿರುದ್ಧದ ಹೋರಾಟ ಈ ಎಲ್ಲವುಗಳ ಭೂಮಿಕೆ, ಕಾರ್ಯಾಚರಣೆ, ವಿಶ್ಲೇಷಣೆ ಎಲ್ಲವುಗಳಲ್ಲೂ ರಾಮಸ್ವಾಮಿಯವರು ಇರುತ್ತಿದ್ದರು. </p><p>ಅದೇ ಎತ್ತರದ ನಿಲುವು, ಅದೇ ಉದ್ದನ್ನ ನಿಲುವಂಗಿ, ಅದೇ ಉದ್ದನ್ನ ಜೋಳಿಗೆ, ಅದೇ ಲುಕ್ಕು. ಇವರಿಗೆ ಮಿಲಿಟರಿ ಡ್ರೆಸ್ ತೊಡಿಸಿ, ತಲೆಗೆ ಕೋರೆ ಟೋಪಿ ಹಾಕಿದರೆ ಪಕ್ಕಾ ನೇತಾಜಿ ಸುಭಾಷ್ ಚಂದ್ರ ಬೋಸ್ ಥರಾ ಕಾಣುತ್ತಾರಲ್ವೆ ಎಂದು ನಾನು ಒಂದಿಬ್ಬರೊಂದಿಗೆ ಹೇಳಿದ್ದೂ ಇದೆ. ಆದರೆ ಸದಾ ಮೆಲು ನುಡಿ. ದಿಗಂತದತ್ತ ನೋಟ. ತಾನು ಮೆಲ್ಲಗೆ ಹೇಳಿದ್ದರಲ್ಲಿ ಮುಖ್ಯವೆನ್ನಿಸಿದ ವಾಕ್ಯವನ್ನು ಎರಡನೇ ಬಾರಿ ಹೇಳುತ್ತಿದ್ದರು (ಅಂಡರ್ಲೈನ್ ಮಾಡುತ್ತಿದ್ದರು) ಎಂಬುದನ್ನು ಬಿಟ್ಟರೆ, ಅಬ್ಬರ ಇಲ್ಲವೇ ಇಲ್ಲ. </p><p>ಎಷ್ಟೇ ಜನ ಸುತ್ತಲೂ ಇದ್ದರೂ ನನಗಾಗಿ ತಮ್ಮ ಜೋಳಿಗೆಯಿಂದ ಒಂದು ಪುಸ್ತಕವನ್ನೊ ಅಥವಾ ಇನ್ನೊಂದಿಷ್ಟು ಕ್ಲಿಪಿಂಗನ್ನೊ ಹಸ್ತಾಂತರಿಸುತ್ತಿದ್ದರು. ಆಗಾಗ ಎತ್ತಲೋ ನೋಡುತ್ತ, ‘ಕಾಳಿದಾಸನ ಮೇಘದೂತದ ಮಾದರಿಯಲ್ಲೇ ಅಷ್ಟಾವಧಾನಿ ಗಣೇಶ್ ಅವರು ವಾಯು ಮಾಲಿನ್ಯದ ಬಗ್ಗೆ ಧೂಮದೂತ ಹೆಸರಿನ ಕಾವ್ಯ ರಚಿಸಿದ್ದು ನಿಮ್ಮ ಗಮನಕ್ಕೆ ಬಂತೆ?ʼ ಎಂದು ಕೇಳಿದ್ದು ನೆನಪಿದೆ. ಮುಂದೆ ಗಣೇಶ್ ಅವರಿಗೂ ನನ್ನ ವಿಳಾಸ ಕಳಿಸಿ, ಆ ಸುಂದರ ಕಾವ್ಯ ನನ್ನನ್ನು ತಲುಪುವಂತೆ ಅವರು ವಹಿಸಿದ ಆಸಕ್ತಿ ಅನುಪಮವಾದುದು. ಇನ್ನೊಮ್ಮೆ ‘ಇಎಫ್ ಶ್ಯುಮಾಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಕಡೆ ಒಮ್ಮೆ ಕಣ್ಣು ಹಾಯಿಸಿʼ ಎಂತಲೋ ಪಿಸುಗುಟ್ಟಿದಂತೆ ಹೇಳುತ್ತಿದ್ದರು. </p><p>ಪರಿಸರ ಹೋರಾಟದ ದಿನಗಳಲ್ಲಿ ಒಮ್ಮೆ ಎಸ್ಸಾರಾರ್ ನನ್ನ ತವರೂರು ಬಕ್ಕೆಮನೆಗೂ ಬಂದಿದ್ದರು. ನಮ್ಮೂರಿನ ಸುತ್ತಲ ಗುಡ್ಡ, ಕಣಿವೆ, ಹಳ್ಳಕೊಳ್ಳಗಳಲ್ಲಿ ಅವರು ತುಸು ಅಂಜುತ್ತಲೇ ಹೆಜ್ಜೆ ಇಡುತ್ತ, ಹಳ್ಳಿಯ ಜನರನ್ನೂ ದನಕರುಗಳನ್ನೂ ಪ್ರೀತಿಯಿಂದ ಮಾತನಾಡಿಸುತ್ತ, ಅವರು ಕಳೆದ ಆ ಎರಡು ದಿನಗಳನ್ನು ಈಗಲೂ ನಮ್ಮೂರಿನ ಕೆಲವರು ನೆನಪಿಸಿಕೊಳ್ಳುತ್ತಾರೆ. ನಮ್ಮೂರಿನ ಬಹುತೇಕ ಎಲ್ಲ ಗಂಡಸರೂ ಸದಾ ಬಾಯಲ್ಲಿ ಎಲೆಯಡಿಕೆ ಹಾಕಿಕೊಳ್ಳುವುದನ್ನು ನೋಡಿ ತಾನೂ ಒಂದು ಅಡಿಕೆ ಚೂರನ್ನು ಬಾಯಲ್ಲಿ ಅಗಿಯುತ್ತ, ‘ದಿಸ್ ಈ ಜಸ್ಟ್ ವುಡ್; ಕಟ್ಟಿಗೆ ಚಕ್ಕೆಯನ್ನು ಜಗಿದ ಹಾಗಿದೆʼ ಎಂದು ಹೇಳಿದ್ದು ನನಗಿನ್ನೂ ನೆನಪಿದೆ. </p><p>ನನ್ನ ಜೆಎನ್ಯೂ ಗೆಳತಿ ರೇಖಾಳ ಜೊತೆ ನಾನು ಬೆಂಗಳೂರಿನಲ್ಲಿ ಸರಳ ವಿವಾಹವಾಗಲು ನಿರ್ಧರಿಸಿದಾಗ ’ಆರ್ಯಸಮಾಜ‘ವೇ ಸೂಕ್ತವೆಂಬ ಸಲಹೆ ಅವರಿಂದಲೇ ಬಂದಿತ್ತು. ಕೇವಲ ಹದಿನೈದು ಜನರ ಹಾಜರಿಯಲ್ಲಿ ನಾನು ರೇಖಾಗೆ ಮಾಂಗಲ್ಯ ಕಟ್ಟಿ, ಚುಟುಕಾಗಿ, ಶಾಸ್ತ್ರೋಕ್ತವಾಗಿ ವಿವಾಹ ಹೋಮ ಮುಗಿಸಿದ ನಂತರ, ನಮ್ಮ ಮ್ಯಾರೇಜ್ ಸರ್ಟಿಫಿಕೇಟಿನ ಮೇಲೆ ಸಾಕ್ಷೀದಾರರಾಗಿ ಎಸ್ ಆರ್ ರಾಮಸ್ವಾಮಿಯವರೇ ಹಸ್ತಾಕ್ಷರ ಹಾಕಿದರು. ನಮ್ಮ ಮನೆಯಂಗಳದಲ್ಲಿ ರೇಖಾ ಹೂ ಕೀಳುತ್ತಿರುವ ಫೋಟೊವನ್ನು ನನ್ನಿಂದ ಕೇಳಿ ಪಡೆದು, ಅದನ್ನು ಮುಖಪುಟ ಚಿತ್ರವನ್ನಾಗಿ ‘ಉತ್ಥಾನʼದಲ್ಲಿ ಪ್ರಕಟಿಸಿದರು ಕೂಡ. </p><p>ಒಮ್ಮೆ ರಾಜಾಜಿನಗರದ ನಮ್ಮ ಮನೆಗೆ ಬಂದಿದ್ದವರು ಚಹ ಸೇವನೆಯ ನಂತರ ಹೊರಡುವಾಗ, ತಮ್ಮ ಜೋಳಿಗೆಯಿಂದ ಅದೇನೊ ಕ್ಲಿಪಿಂಗ್ ಹೊರಕ್ಕೆ ತೆಗೆದು ಮೆಲ್ಲಗೆ, ‘ನೈರೋಬಿಗೆ ಹೋಗಿ ಬರ್ತೀರಾʼ? ಕೇಳಿದರು -ಇಲ್ಲೇ ರಾಗಿಗುಡ್ಡಕ್ಕೆ ಹೋಗಿ ಬರ್ತೀರಾ ಎಂದು ಕೇಳಿದಷ್ಟೇ ಸಹಜವಾಗಿ. </p><p>ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ವಿಶ್ವಸಂಸ್ಥೆಯವರ ಯುಎನ್ಇಪಿ (ಪರಿಸರ ಕಾರ್ಯಸಂಸ್ಥೆ) ಇದೆ. ಅದು ತನಗೆ ಮಾಧ್ಯಮ ಅಧಿಕಾರಿಯೊಬ್ಬರು ಬೇಕಾಗಿದ್ದಾರೆ ಎಂದು ಎಲ್ಲೋ ಪ್ರಕಟಣೆ ಹೊರಡಿಸಿದ್ದು ಇವರ ಕಣ್ಣಿಗೆ ಬಿದ್ದಿತ್ತು. ಅದನ್ನು ನನಗೆ ಕೊಡಲೆಂದೇ ಎಸ್ಸಾರಾರ್ ಬಂದಿದ್ದರು. ‘ಅರ್ಜಿ ಹಾಕಿ, ಹೋಗಿ ಬನ್ನಿ; ನಿಮಗೆ ಆ ಹುದ್ದೆ ಸಿಕ್ಕರೆ ಭಾರತಕ್ಕೂ ಒಳ್ಳೇದುʼ ಎಂದು ತಮ್ಮ ಸಹಜ ತಣ್ಣನ್ನ ಸ್ವರದಲ್ಲಿ ಒತ್ತಾಯ ಹಾಕಿದರು. </p><p>ನಾನು ಅರ್ಜಿ ಹಾಕಿದೆ. ಆ ಹುದ್ದೆ ಬೇಕು ಅಂತೇನೂ ಅಲ್ಲ, ಪುಕ್ಕಟೆ ನೈರೋಬಿಗೆ ಹೋಗಿ ಬರಬಹುದು ಎಂಬುದೇ ನನ್ನ ಆಗಿನ ವಿಚಾರವಾಗಿತ್ತು. ಕೊನೆಗೂ ಅಷ್ಟೇ ಆಯಿತು ಅನ್ನಿ. ಸಂದರ್ಶನಕ್ಕೆ ಕರೆ ಬಂತು; ನನಗಿಂತ ಸ್ಮಾರ್ಟ್ ಆಗಿದ್ದ ದಿಲ್ಲಿಯ ರವಿ ಶರ್ಮಾ ಹೆಸರಿನವರೊಬ್ಬರಿಗೆ ಆ ಹುದ್ದೆ ಸಿಕ್ಕಿತು. ರಾಮಸ್ವಾಮಿಯವರ ನಿರೀಕ್ಷೆಯ ಮಟ್ಟಕ್ಕೆ ಏರಲಿಲ್ಲ ಎಂಬ ಬೇಸರ ಬಿಟ್ಟರೆ ಹುದ್ದೆ ಸಿಗದ್ದಕ್ಕೆ ಬೇಜಾರೇನೂ ಆಗಿರಲಿಲ್ಲ. </p><p>90ರ ದಶಕದಲ್ಲಿ ಚಳವಳಿಗಳ ಕಾವೆಲ್ಲ ಇಳಿದ ಮೇಲೆ, ಡಾ. ಶಿವರಾಮ ಕಾರಂತರು ಚುನಾವಣೆಯಲ್ಲಿ ಸೋತ ಮೇಲೆ, ಡಾ. ಕುಸುಮಾ ಸೊರಬ ಅವರು ರಸ್ತೆ ಅಪಘಾತದಲ್ಲಿ ಅಳಿದ ಮೇಲೆ, ಜಾಗತೀಕರಣದ ಸುನಾಮಿಯ ಅಬ್ಬರದಲ್ಲಿ ಯುವಜನರೆಲ್ಲ ವೃತ್ತಿಪರ ಕೋರ್ಸ್ಗಳಲ್ಲಿ, ಕಂಪ್ಯೂಟರ್ ಸಾಫ್ಟ್ವೇರ್ ರಂಗದಲ್ಲಿ ತೊಡಗಿಕೊಂಡ ಮೇಲೆ ನಮ್ಮಿಬ್ಬರ ಒಡನಾಟ ಕಡಿಮೆ ಆಗುತ್ತ ಬಂತು. ನಾವಿಬ್ಬರೂ ಪತ್ರಕರ್ತ/ಗ್ರಂಥಕರ್ತರೇ ಆಗಿದ್ದರೂ ನಮ್ಮಿಬ್ಬರ ದಾರಿ ಬೇರೆ ಬೇರೆಯೇ ಆಗತೊಡಗಿತ್ತು ಅನ್ನೋದೂ ನಿಜ. </p><p>ಅವರ ನೆನಪಿನ ಶಕ್ತಿಯೊ ಅದೆಷ್ಟು ಅಗಾಧ! ವರ್ಷಗಟ್ಟಲೆ ಅವರಿಗೆ ಒಂದು ಫೋನ್ ಕೂಡ ಮಾಡದೆ ಅಪರೂಪಕ್ಕೆ ಅನಿರೀಕ್ಷಿತವಾಗಿ ಭೇಟಿಯಾದಾಗಲೂ ‘ಬಕ್ಕೆಮನೆಗೆ ಹೋಗಿದ್ರಾ? ಶ್ರೀಪಾದ ಹೇಗಿದಾರೆ, ಉಮಾಪತಿಯ ಬಿಸಿನೆಸ್ ಹೇಗಿದೆ?ʼ ಎಂದು ನನ್ನ ತಮ್ಮಂದಿರ ಬಗ್ಗೆ ಅವರು ಕೇಳಿಯೇ ಸಿದ್ಧ. ನನ್ನ ಈಚಿನ ಲೇಖನಗಳ ಬಗ್ಗೆ ಪ್ರಸ್ತಾಪ ಮಾಡಿಯೇ ಸಿದ್ಧ. ನನ್ನ ಮಗ ಹೇಮಂತನ ಬಗ್ಗೆ ವಿಚಾರಿಸಿಯೇ ಸಿದ್ಧ. </p><p>ನಿವೃತ್ತನಾಗಿ ನಾನು ಕೆಂಗೇರಿಯ ಆಚೆ ಒಂದು ಪುಟ್ಟ ತೋಟವನ್ನು ರೂಪಿಸಿದ್ದು ಗೊತ್ತಾಗಿ, ತಮ್ಮ ಒಂದಿಬ್ಬರು ಯುವ ಶಿಷ್ಯರ ಜೊತೆ ಅಲ್ಲಿಗೂ ಬಂದು ಕೆಲ ಕಾಲ ಅಡ್ಡಾಡಿದರು. ಜಾಗತಿಕ ಪರಿಸರ ವಿದ್ಯಮಾನಗಳ ಬಗ್ಗೆ ಗೋಖಲೆ ಸಂಸ್ಥೆಯಲ್ಲಿ ನನ್ನದೂ ಒಂದು ಉಪನ್ಯಾಸ ಇಟ್ಟು ಗೌರವಿಸಿದರು. ನಾನು ಬೆಂಗಳೂರು ನಗರಕ್ಕೆ ಬರುವುದೇ ತೀರ ಕಡಿಮೆಯಾಗಿದ್ದರಿಂದ ಅವರ ನೇರ ಭೇಟಿ ಸಾಧ್ಯವಾಗುತ್ತಿಲ್ಲ. ಆದರೆ ಅವರು ರಚಿಸಿದ ಪಾಂಡಿತ್ಯಪೂರ್ಣ ಗ್ರಂಥಗಳೆಲ್ಲ ನನ್ನ ಕಪಾಟಲ್ಲಿ ಸಾಲಾಗಿ ಕೂತಿವೆ.</p><p>‘ರಾಮಸ್ವಾಮಿಯವರ ಆರೋಗ್ಯ ಹದಗಟ್ಟಿದೆ, ತೀರ ದುರ್ಬಲರಾಗಿದ್ದಾರೆʼ ಎಂದು ಆರೆಂಟು ವರ್ಷಗಳ ಹಿಂದೆ ಅನಂತ ಅಶೀಸರ ಅಥವಾ ವೈ.ಬಿ. ರಾಮಕೃಷ್ಣರಂಥ ಪರಿಸರಮಿತ್ರರು ತಿಳಿಸಿದಾಗ ನಾನು ನನ್ನನ್ನೇ ಶಪಿಸಿಕೊಳ್ಳುತ್ತ ಹೇಗೋ ಪುರುಸೊತ್ತು ಮಾಡಿಕೊಂಡು ಅವರನ್ನು ನೋಡಲೆಂದು ‘ಕೇಶವ ಕೃಪಾʼಕ್ಕೆ ಹೋದಾಗಲೆಲ್ಲ, ಅವರು ತನಗೇನೂ ಆಗಿಲ್ಲವೆಂಬಂತೆ, ‘ಕಾಯಿಲೆ ಕಸಾಲೆ ಇದೆಲ್ಲ ಬಿಡಿ, ಇದ್ದದ್ದೇ- ನಾವು ಅತ್ತ ಗಮನಕೊಡದಿದ್ದರೆ ಆಯಿತುʼ ಎನ್ನುತ್ತ ಸ್ಥಿತಪ್ರಜ್ಞತೆಯನ್ನು ಮೆರೆಯುತ್ತ ಎಂದಿನಂತೆ, ತಲೆತಗ್ಗಿಸಿ ರಾಷ್ಟ್ರೋತ್ಥಾನ ಸಾಹಿತ್ಯವನ್ನು ಉಜ್ವಲಗೊಳಿಸುವ ಕೆಲಸದಲ್ಲಿ ಮಗ್ನರಾಗುವುದನ್ನು ನಾನು ನೋಡಿದ್ದೇನೆ. ನಮ್ಮ ಭೇಟಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರ್ಭಗುಡಿಯಲ್ಲೇ ಆಗುತ್ತಿದ್ದರೂ ಅಪ್ಪಿತಪ್ಪಿ ಕೂಡ ಆರೆಸ್ಸೆಸ್ನ ಧ್ಯೇಯ ಧೋರಣೆಗಳ ಬಗ್ಗೆ ಒಂದು ಮಾತನ್ನೂ ಆಡಿರಲಿಲ್ಲ. ನಮ್ಮ ಸಂವಾದ ಏನಿದ್ದರೂ ಗ್ಲೋಬಲ್ ಎಕಾನಮಿ, ಪರಿಸರ ಸಂರಕ್ಷಣೆ, ಸರ್ಕಾರೇತರ ಸಂಘಟನೆ ಇತ್ಯಾದಿಗಳ ಬಗ್ಗೆ ಇದ್ದವು. </p><p>ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅವರ ಅಮೋಘ ಪಾಂಡಿತ್ಯ, ನವಭಾರತದ ರೂವಾರಿಗಳ ಕುರಿತ ಅವರ ಅಗಾಧ ತಿಳುವಳಿಕೆ, ಅಚ್ಚಳಿಯದ ನೆನಪಿನ ಶಕ್ತಿ, ಯಾವ ಕ್ಷಣದಲ್ಲೂ ತಣ್ಣಗೆ ಚಿಮ್ಮಬಲ್ಲ ಹಾಸ್ಯಪ್ರಜ್ಞೆ ಇವೆಲ್ಲವುಗಳ ತವನಿಧಿಯಾಗಿರುವ ಅವರು ನನ್ನ ಹಿರಿಯ ಗೆಳೆಯ, ಹಿತೈಷಿ ಅಷ್ಟೇ ಅಲ್ಲ, ನಾನು ಮನಃಪೂರ್ವಕವಾಗಿ ತಲೆಬಾಗಬಯಸುವ ಏಕೈಕ ಸಂತ. ಅದರಲ್ಲೇನೂ ಅನುಮಾನವಿಲ್ಲ. </p><p>ನನ್ನ ಪತ್ರಿಕಾವೃತ್ತಿಯ ಆರಂಭದ ದಿನಗಳಲ್ಲಿ ನನಗೊಂದು ಖಚಿತ ದಿಶಾನಿರ್ದೇಶನ ಕೊಟ್ಟವರು, ಅಧ್ಯಯನಶೀಲತೆಯ ಮಹತ್ವವನ್ನು ತಮ್ಮ ಮೆಲುಮಾತಿಗಳಲ್ಲಿ ತಿಳಿಸಿದವರು ರಾಮಸ್ವಾಮಿಯವರು. ಚಳವಳಿ, ಹೋರಾಟ, ಪ್ರತಿರೋಧದ ಅಂತಸ್ಸತ್ವ ನನ್ನಲ್ಲಿ ಗಟ್ಟಿಯಾಗಲು ಅವರು ಕಾರಣರು. ಆಳುವ ಪಕ್ಷ ಯಾವುದೇ ಇರಲಿ, ಪತ್ರಕರ್ತ ಸದಾಕಾಲ ಪ್ರತಿಪಕ್ಷದಲ್ಲೇ ಇರಬೇಕೆಂಬ ನಿಲುವು ನನ್ನಲ್ಲಿ ಹರಳುಗಟ್ಟಲು ಅವರು ಕಾರಣರು.</p><p>[ಇಂದು (ಶುಕ್ರವಾರ) ಅಗಲಿದ ನಾಡೋಜ ಎಸ್. ಆರ್. ರಾಮಸ್ವಾಮಿಯವರ ಗೌರವಗ್ರಂಥಕ್ಕೆ ಮೂರು ವರ್ಷಗಳ ಹಿಂದೆ ನಾನು ಬರೆದಿದ್ದ ಲೇಖನದ ಭಾಗ ಇದು: ಅವರ ಬಯೊಡಾಟಾ ಇದಲ್ಲ.]</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಸ್.ಆರ್. ರಾಮಸ್ವಾಮಿ ನನ್ನ ಬದುಕಿಗೆ ಮಹಾ ತಿರುವನ್ನು ಕೊಟ್ಟ ಮಹಾನುಭಾವ. </p><p><strong>ಅದರ ಕತೆ ಹೀಗಿದೆ:</strong></p><p>ನಾನು ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಎಮ್ಎಸ್ಸಿ ವಿದ್ಯಾರ್ಥಿಗಳಿಗೆ ಪರಿಸರ ವಿಜ್ಞಾನದ ಪಾಠ ಹೇಳುತ್ತಿದ್ದೆ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ; ನನಗೆ ಹಿಂದಿ ಅಷ್ಟಾಗಿ ಗೊತ್ತಿರಲಿಲ್ಲ. </p><p>ಹೇಗೋ ಒದ್ದಾಡುತ್ತಿದ್ದಾಗ ಬೆಂಗಳೂರಿನ ‘ಉತ್ಥಾನ’ ಪತ್ರಿಕೆಯ ಸಂಪಾದಕರಿಂದ ನನಗೊಂದು ಪತ್ರ ಬಂತು, ‘ಒಂದು ಲೇಖನ ಕೊಡಿ’ ಅಂತ. ಯುವ ಬರೆಹಗಾರನಿಂದ ಸಂಪಾದಕರೇ ಲೇಖನ ಕೇಳಿದ್ದಾರೆಂದರೆ ಅದು ಸಂಭ್ರಮದ ಸಂಗತಿಯಾಗಿತ್ತು. </p><p>ಎರಡೇ ದಿನಗಳಲ್ಲಿ ‘ನದಿ ನೀರಿಗೆ ವಿಷಪ್ರಾಶನ’ ಹೆಸರಿನ ಲೇಖನ ಬರೆದು, ಅದಕ್ಕೊಂದೆರಡು ಚಿತ್ರಗಳನ್ನೂ ಬರೆದು ಅಂಚೆಗೆ ಹಾಕಿದೆ. [ಮುಂದೆ ಅದೇ ಲೇಖನ ಕನ್ನಡ ಏಳನೆಯ ತರಗತಿಯ ಪಠ್ಯದಲ್ಲಿ ಸೇರಿತು, ಆ ಮಾತು ಬೇರೆ] </p><p>‘ಉತ್ಥಾನʼ ಸಂಪಾದಕರ ಆ ಪತ್ರ ನನ್ನ ಬದುಕಿನ ದಾರಿಯನ್ನೇ ಬದಲಿಸುವಷ್ಟು ಚೇತೋಹಾರಿ ಆಗಿತ್ತೆಂದು ಈಗ ಅನ್ನಿಸುತ್ತಿದೆ. </p><p>ಏಕೆಂದರೆ, ’ಸುಧಾ‘ ಪತ್ರಿಕೆಯಲ್ಲಿ ನನ್ನ ಲೇಖನಗಳು ಪ್ರಕಟವಾಗುತ್ತಿದ್ದವು. ಈಗ ಉತ್ಥಾನವೂ ನನ್ನನ್ನು ಗುರುತಿಸಿದ್ದರಿಂದ ನಾನು ಉಪನ್ಯಾಸಕ ವೃತ್ತಿ ಬಿಟ್ಟು ಪತ್ರಕರ್ತ/ ಬರಹಗಾರ ಆದರೂ ಆಗಬಹುದು ಎಂಬ ಸಣ್ಣ ಭರವಸೆ ನನ್ನಲ್ಲಿ ಮೊಳೆಯತೊಡಗಿತ್ತು. </p><p>ಅದೇ ದಿನಗಳಲ್ಲಿ ‘ಉಪಸಂಪಾದಕರು ಬೇಕಾಗಿದ್ದಾರೆʼ ಎಂಬ ಪುಟ್ಟ ಜಾಹೀರಾತು ‘ಸುಧಾʼದಲ್ಲಿ ಕಾಣಿಸಿಕೊಂಡಿತು. ನೋಡೋಣವೆಂದು ನಾನು ಅರ್ಜಿ ಹಾಕಿದೆ. ಪತ್ರಕರ್ತನಾಗಿಬಿಟ್ಟೆ. ನೈನಿತಾಲನ್ನು ಬಿಟ್ಟೆ. </p><p>ನಂತರ ತಿಳಿದುಬಂದ ಅಚ್ಚರಿಯ ಸಂಗತಿ ಏನೆಂದರೆ, ಶ್ರೀಯುತ ಎಸ್.ಆರ್. ರಾಮಸ್ವಾಮಿಯವರು ‘ಸುಧಾʼ ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದವರು ರಾಜೀನಾಮೆ ಕೊಟ್ಟಿದ್ದರಿಂದಲೇ ಆ ಹುದ್ದೆ ಖಾಲಿಯಾಗಿ, ಅದೇ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿತ್ತು.</p>.ಪತ್ರಕರ್ತ, ಸಾಹಿತಿ, ಪರಿಸರವಾದಿಯೂ ಆಗಿದ್ದರು ವಿದ್ವಾಂಸ ಎಸ್.ಆರ್. ರಾಮಸ್ವಾಮಿ. <p>ಅದು ನನಗಾಗಿಯೇ ಸೃಷ್ಟಿಯಾಗಿದೆಯೊ ಎಂಬಂತಿತ್ತು. ಏಕೆಂದರೆ ‘ಸುಧಾʼ ಬಿಟ್ಟರೆ ನನಗೆ ನೈನಿತಾಲ್ನಲ್ಲಿ ಬೇರೆ ಯಾವುದೇ ಕನ್ನಡ ಪತ್ರಿಕೆ ಸಿಗುತ್ತಿರಲಿಲ್ಲ. ಪ್ರಜಾವಾಣಿ ಅಥವಾ ಬೇರೆ ಯಾವುದೇ ಪತ್ರಿಕೆಯಲ್ಲಿ ಜಾಹೀರಾತು ಬಂದಿದ್ದರೂ ನನ್ನ ಗಮನಕ್ಕೆ ಅದು ಬರುತ್ತಿರಲಿಲ್ಲ. ನಾನು ಪತ್ರಕರ್ತ ಆಗುತ್ತಿರಲೂ ಇಲ್ಲ. </p><p>ಈಗ ಹಿಂದಿರುಗಿ ನೋಡಿದರೆ, ಅವರು ಬಿಟ್ಟು ಹೋದ ದೋಣಿಯನ್ನು ನಾನು ಏರಿದೆ ಅಂತ ಅನ್ನಿಸುತ್ತಿದೆ. ಅಷ್ಟೇ ಆಗಿದ್ದರೆ ನಾನು ಈ ಲೇಖನವನ್ನು ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಅದು ಆರಂಭವಾಗಿತ್ತಷ್ಟೆ.</p><p>ಪತ್ರಕರ್ತನಾಗಿ ಬೆಂಗಳೂರಿಗೆ ಬಂದ ಮೇಲೆ ನಾನು ‘ಉತ್ಥಾನʼ ಸಂಪಾದಕರಿಗೆ ಧನ್ಯವಾದ ಹೇಳಲೆಂದು ‘ಕೇಶವ ಕೃಪಾʼಕ್ಕೆ ಹೋದೆ. ಈಗಿನಂತೆ ಅಂದು ಅದು ಅಷ್ಟೇನೂ ಭವ್ಯ ಕಟ್ಟಡವಾಗಿರಲಿಲ್ಲ. ಎಷ್ಟೋ ವರ್ಷಗಳಿಂದ ಪರಿಚಿತ ಎಂಬಂತೆ ಅವರು ನನ್ನನ್ನು ಎದುರು ಕೂರಿಸಿ, ನನ್ನದೇ ಅದುವರೆಗಿನ ಬರಹಗಳನ್ನು ಅವರು ಚರ್ಚಿಸಿದ್ದು ನನಗಿನ್ನೂ ನೆನಪಿದೆ. </p><p>ತನ್ನ ಬಗ್ಗೆ ಹೇಳಿಕೊಳ್ಳುವ ಬದಲು ತನ್ನೆದುರು ಕೂತವರ ಗುಣವಿಶೇಷಗಳನ್ನು ಬಣ್ಣಿಸಬಲ್ಲವರು ಅಪರೂಪ. ಅಂಥವರು ಯಾರಿಗಾದರೂ ಇಷ್ಟವಾಗುತ್ತಾರೆ ತಾನೆ?</p><p>ನನಗೆ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ತಾನು ಹಿಂದೆ ‘ಸುಧಾʼದಲ್ಲಿದ್ದೆ ಎಂಬುದನ್ನಾಗಲೀ ತಾನು ಡಿವಿಜಿಯವರ ಸನ್ನಿಧಾನದಲ್ಲಿ, ಅವರ ಸೆಕ್ರೆಟರಿಯಾಗಿ ಕೆಲಸ ಮಾಡಿದ್ದೆ ಎಂಬುದನ್ನಾಗಲೀ ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. </p><p>ಬದಲಿಗೆ, ನನಗೆ ಇಷ್ಟವಾಗಬಹುದಾದ ವಿಷಯಗಳ ಬಗ್ಗೆ (ಅಂದರೆ ದೊಡ್ಡ ಅಣೆಕಟ್ಟುಗಳಿಂದಾಗುವ ಧ್ವಂಸಕಾರ್ಯದ ಬಗ್ಗೆ, ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯ ಅಧ್ವಾನಗಳ ಬಗ್ಗೆ ಮೆಲುದನಿಯಲ್ಲಿ ತಮ್ಮದೇ ಸ್ವಗತವೆಂಬಂತೆ) ಮಾತಾಡಿದರು. ಮಧ್ಯೆ ಮಧ್ಯೆ ಎದ್ದು ಹೋಗಿ ತಮ್ಮ ಹಿಂಬದಿಯ ಕಪಾಟಿನಿಂದ ಕೆಲವು ಲೇಖನಗಳನ್ನು, ಪ್ರೆಸ್ ಕ್ಲಿಪಿಂಗ್ಗಳನ್ನು ಹೆಕ್ಕಿ, ‘ನಿಮಗೇನಾದರೂ ಇದು ಉಪಯುಕ್ತ ಆಗಬಹುದು, ಇಟ್ಕೊಳ್ಳಿʼ ಎನ್ನುತ್ತ ಕೊಟ್ಟರು. ರಸ್ತೆಯವರೆಗೂ ಬಂದು ಬೀಳ್ಕೊಟ್ಟರು.</p><p>ಬೆಂಗಳೂರಿನಲ್ಲಿ ಮೊದಲ ಬಾರಿ ನನಗೊಬ್ಬ ಗೆಳೆಯ, ಹಿರಿಯ ಹಿತೈಷಿ ಸಿಕ್ಕಂತೆನಿಸಿತ್ತು. ಅದೂ ಆರಂಭವಷ್ಟೆ. ಮುಂದೆ ಆಗಾಗ ಅವರೇ ನನ್ನ ಭೇಟಿಗೆ ಬರುತ್ತಿದ್ದರು ರಿಚ್ಮಂಡ್ ರಸ್ತೆಯ ಶಾನಭಾಗ್ ಹೊಟೆಲ್ನಲ್ಲೊ, ವಿಕ್ಟೋರಿಯಾದಲ್ಲೋ ಯುಟಿಲಿಟಿ ಕಟ್ಟಡದ ಬಳಿಯ ಮೋಬೋಸ್ ಹೊಟೆಲ್ನಲ್ಲೋ ಕೂತು ರಾತ್ರಿ ಎಂಟರವರೆಗೂ ಚಿಂತನಗೋಷ್ಠಿ ನಡೆಸುತ್ತಿದ್ದೆವು. </p><p>ಮಾಮೂಲಿನಂತೆ, ನನಗಿಂತ ಅವರೇ ಹೆಚ್ಚು ಮಾತಾಡುತ್ತಿದ್ದರು. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯ ಇತ್ಯಾದಿಗಳ ಬಗ್ಗೆ ಅವರು ಹೇಳುತ್ತಿದ್ದರು. ಕರ್ನಾಟಕದಿಂದ ದಶಕಗಳ ಕಾಲ ದೂರವಿದ್ದ ನನಗೆ ಅದೊಂದು ಬಗೆಯ ಟ್ಯೂಶನ್ ಪಾಠವೇ ಆಗಿರುತ್ತಿತ್ತು. ಅದು ಎಂದೂ ನೀರಸ ಪಾಠ ಆಗಿರುತ್ತಿರಲಿಲ್ಲ. ಅವರಿಗೇ ಕೇಳಿಸದಷ್ಟು ಸಣ್ಣ ದನಿಯಲ್ಲಿ ಅವರು ಮಧ್ಯೆ ಮಧ್ಯೆ ಜೋಕ್ಗಳನ್ನು ಹೇಳುತ್ತಿದ್ದರು. ಅದೆಷ್ಟೊಂದು ಹಾಸ್ಯ ಪ್ರಸಂಗಗಳು ಅವರಿಗೆ ಅದೆಲ್ಲಿಂದ ನೆನಪಾಗುತ್ತಿದ್ದವೊ ನನಗೆ ಅಚ್ಚರಿಯಾಗುತ್ತಿತ್ತು. </p><p>ಅವುಗಳ ಮಧ್ಯೆ, ನನಗೆಂದೇ ಅವರು ಹೆಕ್ಕಿ ತರುತ್ತಿದ್ದ ಪುಸ್ತಕಗಳು, ಟಿಪ್ಪಣಿಗಳು, ಪಾಂಫ್ಲೆಟ್ಗಳು ಅವರ ಜೋಳಿಗೆಯಿಂದ ನನ್ನ ಚೀಲಕ್ಕೆ ಸೇರುತ್ತಿದ್ದವು. ಅವೆಲ್ಲ ಹೆಚ್ಚಿನದಾಗಿ ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ, ಆರ್ಥಿಕ ಚಿಂತನೆಗಳ ಬಗ್ಗೆ ಹಾಗೂ ಅಭಿವೃದ್ಧಿಯ ಧೋರಣೆಗಳ ಬಗೆಗಿನ ಸಾಹಿತ್ಯವೇ ಆಗಿರುತ್ತಿತ್ತು. ಅವುಗಳನ್ನು ನನಗೆ ಹಸ್ತಾಂತರಿಸುತ್ತ, ‘ನೋಡಿ, ಸಾಧ್ಯವಾದರೆ ಇದರ ಬಗ್ಗೆ ಬರೆಯಿರಿʼ ಎಂದು ಸೂಚನೆ ಅವರಿಂದ ಬಂತೆಂದರೆ ನಮ್ಮಿಬ್ಬರ ಅಂದಿನ ಸಭೆ ಮುಕ್ತಾಯದ ಹಂತಕ್ಕೆ ಬಂತೆಂಬ ಸೂಚನೆ ನನಗೆ ಸಿಗುತ್ತಿತ್ತು. </p><p>ತಾನು ಬಿಟ್ಟು ಬಂದ ದೋಣಿಯಲ್ಲಿ ಮುಂದೆ ಸಾಗುವವನಿಗೆ ದೋಣಿ ನಡೆಯಬೇಕಾದ ದಿಕ್ಕನ್ನೂ, ನಡೆಸುವ ಕಲೆಯನ್ನೂ ಅವರು ನನಗೆ ಹೇಳಿದಂತೆನಿಸುತ್ತಿತ್ತು.</p><p><strong>ಎರಡು ‘ಎಸ್ಸಾರ್ʼಗಳ ನಡುವೆ ಒಂದಿಷ್ಟು ಒಡನಾಟ :</strong> </p><p>ಎಂಭತ್ತರ ದಶಕವೆಂದರೆ ಕರ್ನಾಟಕದಲ್ಲಿ ನಾನಾ ಬಗೆಯ ಚಳವಳಿಗಳ ಉಚ್ಛ್ರಾಯ ಕಾಲವೇ ಆಗಿತ್ತು. ರೈತ ಚಳವಳಿ, ಕಾರ್ಮಿಕ ಚಳವಳಿ, ಗ್ರಾಹಕ ಚಳವಳಿ, ವಿದ್ಯಾರ್ಥಿ ಚಳವಳಿ, ಮಹಿಳಾ ಚಳವಳಿ, ದಲಿತ ಚಳವಳಿ ಅವೆಲ್ಲವುಗಳ ಮಧ್ಯೆ ಹೊಸದಾಗಿ ಪರಿಸರ ಚಳವಳಿ ಕೂಡ ಸೇರಿಕೊಂಡಿತ್ತು. ನಾಡಿನಾದ್ಯಂತ ಹರಡಿಕೊಂಡಿದ್ದ ಸ್ವಯಂಸೇವಾ ಸಂಸ್ಥೆಗಳೆಲ್ಲ ಒಂದುಗೂಡಿ ‘ಫೆವಾರ್ಡ್ -ಕೆʼ ಹೆಸರಿನ ಒಕ್ಕೂಟವನ್ನು ರಚಿಸಿಕೊಂಡು ಆಗಾಗ ಸಭೆ ಸೇರಿ ಮುಂದಿನ ಪರಿಸರ ಚಳವಳಿಯ ಕಾರ್ಯಕ್ರಮವನ್ನು ರೂಪಿಸುತ್ತಿದ್ದವು. ಅದಕ್ಕೆ ಬೇಕಾದ ಸಾಹಿತ್ಯವನ್ನು, ಕರಪತ್ರವನ್ನು ರಚಿಸುವ ಕೆಲಸ ಆಗಾಗ ನನ್ನ ಪಾಲಿಗೆ ಬರುತ್ತಿತ್ತು. ನನಗೆ ಬೇಕಿದ್ದ ಆಕರ ಸಾಹಿತ್ಯವನ್ನು, ಅಂಕಿ ಅಂಶಗಳನ್ನು ಅದೆಲ್ಲಿಂದಲೋ ರಾಮಸ್ವಾಮಿಯವರೇ ಸಂಗ್ರಹಿಸಿ ಕೊಡುತ್ತಿದ್ದರು. </p><p>ಎಸ್ಸಾರ್ ರಾಮಸ್ವಾಮಿ ಒಂದು ಕಡೆ, ಎಸ್ಸಾರ್ ಹಿರೇಮಠ ಒಂದು ಕಡೆ. ಅದೆಷ್ಟೊ ಬಾರಿ ಹೋರಾಟಗಳ ಮುಂಚೂಣಿಯಲ್ಲಿ ಹಿರೇಮಠರು; ಬಹುತೇಕ ಎಲ್ಲ ಬಾರಿ ನೇಪಥ್ಯದಲ್ಲಿ ರಾಮಸ್ವಾಮಿ ಇರುತ್ತಿದ್ದರು. ನಡುನಡುವೆ ‘ಸ್ನೇಹಕುಂಜʼದ ಡಾ. ಕುಸುಮಾ ಸೊರಬ, ಹುಣಸೂರಿನ ಡೀಡ್ ಸಂಸ್ಥೆಯ ಶ್ರೀಕಾಂತ್, ಬೆಂಗಳೂರಿನ ಆಕ್ಸ್ಫಾಮ್ ಸಂಸ್ಥೆಯ ಜೆರ್ರಿ ಪಯಾಸ್, ಬಿಳಿಗಿರಿ ರಂಗನ ಬೆಟ್ಟದ ಡಾ. ಎಚ್ ಸುದರ್ಶನ್, ಸೇಂಟ್ ಜೋಸೆಫ್ಸ್ ಕಾಲೇಜಿನ ಡಾ. ಥೆಲ್ಮಾ ಮತ್ತು ಡಾ. ರವಿ ನಾರಾಯಣ, ಅಪರೂಪಕ್ಕೆ ಲಿಯೊ ಸಾಲ್ಡಾನ್ಹಾ, ಸುರೇಶ್ ಹೆಬ್ಳೀಕರ್ ಮುಂತಾದವರೂ ಸೇರಿಕೊಳ್ಳತೊಡಗಿದ್ದರು.</p><p>ಹರಿಹರ ಪಾಲಿಫೈಬರ್ಸ್ ವಿರುದ್ಧ ಚಳವಳಿ, ನೀಲಗಿರಿ ವಿರುದ್ಧದ ಚಳವಳಿ, ಬಿಸಗೋಡಿನ ಮ್ಯಾಂಗನೀಸ್ ಗಣಿಗಾರಿಕೆಯ ಹೋರಾಟ, ಶರಾವತಿ ಟೇಲ್ರೇಸ್, ಕೈಗಾ ವಿರುದ್ಧದ ಹೋರಾಟ ಈ ಎಲ್ಲವುಗಳ ಭೂಮಿಕೆ, ಕಾರ್ಯಾಚರಣೆ, ವಿಶ್ಲೇಷಣೆ ಎಲ್ಲವುಗಳಲ್ಲೂ ರಾಮಸ್ವಾಮಿಯವರು ಇರುತ್ತಿದ್ದರು. </p><p>ಅದೇ ಎತ್ತರದ ನಿಲುವು, ಅದೇ ಉದ್ದನ್ನ ನಿಲುವಂಗಿ, ಅದೇ ಉದ್ದನ್ನ ಜೋಳಿಗೆ, ಅದೇ ಲುಕ್ಕು. ಇವರಿಗೆ ಮಿಲಿಟರಿ ಡ್ರೆಸ್ ತೊಡಿಸಿ, ತಲೆಗೆ ಕೋರೆ ಟೋಪಿ ಹಾಕಿದರೆ ಪಕ್ಕಾ ನೇತಾಜಿ ಸುಭಾಷ್ ಚಂದ್ರ ಬೋಸ್ ಥರಾ ಕಾಣುತ್ತಾರಲ್ವೆ ಎಂದು ನಾನು ಒಂದಿಬ್ಬರೊಂದಿಗೆ ಹೇಳಿದ್ದೂ ಇದೆ. ಆದರೆ ಸದಾ ಮೆಲು ನುಡಿ. ದಿಗಂತದತ್ತ ನೋಟ. ತಾನು ಮೆಲ್ಲಗೆ ಹೇಳಿದ್ದರಲ್ಲಿ ಮುಖ್ಯವೆನ್ನಿಸಿದ ವಾಕ್ಯವನ್ನು ಎರಡನೇ ಬಾರಿ ಹೇಳುತ್ತಿದ್ದರು (ಅಂಡರ್ಲೈನ್ ಮಾಡುತ್ತಿದ್ದರು) ಎಂಬುದನ್ನು ಬಿಟ್ಟರೆ, ಅಬ್ಬರ ಇಲ್ಲವೇ ಇಲ್ಲ. </p><p>ಎಷ್ಟೇ ಜನ ಸುತ್ತಲೂ ಇದ್ದರೂ ನನಗಾಗಿ ತಮ್ಮ ಜೋಳಿಗೆಯಿಂದ ಒಂದು ಪುಸ್ತಕವನ್ನೊ ಅಥವಾ ಇನ್ನೊಂದಿಷ್ಟು ಕ್ಲಿಪಿಂಗನ್ನೊ ಹಸ್ತಾಂತರಿಸುತ್ತಿದ್ದರು. ಆಗಾಗ ಎತ್ತಲೋ ನೋಡುತ್ತ, ‘ಕಾಳಿದಾಸನ ಮೇಘದೂತದ ಮಾದರಿಯಲ್ಲೇ ಅಷ್ಟಾವಧಾನಿ ಗಣೇಶ್ ಅವರು ವಾಯು ಮಾಲಿನ್ಯದ ಬಗ್ಗೆ ಧೂಮದೂತ ಹೆಸರಿನ ಕಾವ್ಯ ರಚಿಸಿದ್ದು ನಿಮ್ಮ ಗಮನಕ್ಕೆ ಬಂತೆ?ʼ ಎಂದು ಕೇಳಿದ್ದು ನೆನಪಿದೆ. ಮುಂದೆ ಗಣೇಶ್ ಅವರಿಗೂ ನನ್ನ ವಿಳಾಸ ಕಳಿಸಿ, ಆ ಸುಂದರ ಕಾವ್ಯ ನನ್ನನ್ನು ತಲುಪುವಂತೆ ಅವರು ವಹಿಸಿದ ಆಸಕ್ತಿ ಅನುಪಮವಾದುದು. ಇನ್ನೊಮ್ಮೆ ‘ಇಎಫ್ ಶ್ಯುಮಾಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಕಡೆ ಒಮ್ಮೆ ಕಣ್ಣು ಹಾಯಿಸಿʼ ಎಂತಲೋ ಪಿಸುಗುಟ್ಟಿದಂತೆ ಹೇಳುತ್ತಿದ್ದರು. </p><p>ಪರಿಸರ ಹೋರಾಟದ ದಿನಗಳಲ್ಲಿ ಒಮ್ಮೆ ಎಸ್ಸಾರಾರ್ ನನ್ನ ತವರೂರು ಬಕ್ಕೆಮನೆಗೂ ಬಂದಿದ್ದರು. ನಮ್ಮೂರಿನ ಸುತ್ತಲ ಗುಡ್ಡ, ಕಣಿವೆ, ಹಳ್ಳಕೊಳ್ಳಗಳಲ್ಲಿ ಅವರು ತುಸು ಅಂಜುತ್ತಲೇ ಹೆಜ್ಜೆ ಇಡುತ್ತ, ಹಳ್ಳಿಯ ಜನರನ್ನೂ ದನಕರುಗಳನ್ನೂ ಪ್ರೀತಿಯಿಂದ ಮಾತನಾಡಿಸುತ್ತ, ಅವರು ಕಳೆದ ಆ ಎರಡು ದಿನಗಳನ್ನು ಈಗಲೂ ನಮ್ಮೂರಿನ ಕೆಲವರು ನೆನಪಿಸಿಕೊಳ್ಳುತ್ತಾರೆ. ನಮ್ಮೂರಿನ ಬಹುತೇಕ ಎಲ್ಲ ಗಂಡಸರೂ ಸದಾ ಬಾಯಲ್ಲಿ ಎಲೆಯಡಿಕೆ ಹಾಕಿಕೊಳ್ಳುವುದನ್ನು ನೋಡಿ ತಾನೂ ಒಂದು ಅಡಿಕೆ ಚೂರನ್ನು ಬಾಯಲ್ಲಿ ಅಗಿಯುತ್ತ, ‘ದಿಸ್ ಈ ಜಸ್ಟ್ ವುಡ್; ಕಟ್ಟಿಗೆ ಚಕ್ಕೆಯನ್ನು ಜಗಿದ ಹಾಗಿದೆʼ ಎಂದು ಹೇಳಿದ್ದು ನನಗಿನ್ನೂ ನೆನಪಿದೆ. </p><p>ನನ್ನ ಜೆಎನ್ಯೂ ಗೆಳತಿ ರೇಖಾಳ ಜೊತೆ ನಾನು ಬೆಂಗಳೂರಿನಲ್ಲಿ ಸರಳ ವಿವಾಹವಾಗಲು ನಿರ್ಧರಿಸಿದಾಗ ’ಆರ್ಯಸಮಾಜ‘ವೇ ಸೂಕ್ತವೆಂಬ ಸಲಹೆ ಅವರಿಂದಲೇ ಬಂದಿತ್ತು. ಕೇವಲ ಹದಿನೈದು ಜನರ ಹಾಜರಿಯಲ್ಲಿ ನಾನು ರೇಖಾಗೆ ಮಾಂಗಲ್ಯ ಕಟ್ಟಿ, ಚುಟುಕಾಗಿ, ಶಾಸ್ತ್ರೋಕ್ತವಾಗಿ ವಿವಾಹ ಹೋಮ ಮುಗಿಸಿದ ನಂತರ, ನಮ್ಮ ಮ್ಯಾರೇಜ್ ಸರ್ಟಿಫಿಕೇಟಿನ ಮೇಲೆ ಸಾಕ್ಷೀದಾರರಾಗಿ ಎಸ್ ಆರ್ ರಾಮಸ್ವಾಮಿಯವರೇ ಹಸ್ತಾಕ್ಷರ ಹಾಕಿದರು. ನಮ್ಮ ಮನೆಯಂಗಳದಲ್ಲಿ ರೇಖಾ ಹೂ ಕೀಳುತ್ತಿರುವ ಫೋಟೊವನ್ನು ನನ್ನಿಂದ ಕೇಳಿ ಪಡೆದು, ಅದನ್ನು ಮುಖಪುಟ ಚಿತ್ರವನ್ನಾಗಿ ‘ಉತ್ಥಾನʼದಲ್ಲಿ ಪ್ರಕಟಿಸಿದರು ಕೂಡ. </p><p>ಒಮ್ಮೆ ರಾಜಾಜಿನಗರದ ನಮ್ಮ ಮನೆಗೆ ಬಂದಿದ್ದವರು ಚಹ ಸೇವನೆಯ ನಂತರ ಹೊರಡುವಾಗ, ತಮ್ಮ ಜೋಳಿಗೆಯಿಂದ ಅದೇನೊ ಕ್ಲಿಪಿಂಗ್ ಹೊರಕ್ಕೆ ತೆಗೆದು ಮೆಲ್ಲಗೆ, ‘ನೈರೋಬಿಗೆ ಹೋಗಿ ಬರ್ತೀರಾʼ? ಕೇಳಿದರು -ಇಲ್ಲೇ ರಾಗಿಗುಡ್ಡಕ್ಕೆ ಹೋಗಿ ಬರ್ತೀರಾ ಎಂದು ಕೇಳಿದಷ್ಟೇ ಸಹಜವಾಗಿ. </p><p>ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ವಿಶ್ವಸಂಸ್ಥೆಯವರ ಯುಎನ್ಇಪಿ (ಪರಿಸರ ಕಾರ್ಯಸಂಸ್ಥೆ) ಇದೆ. ಅದು ತನಗೆ ಮಾಧ್ಯಮ ಅಧಿಕಾರಿಯೊಬ್ಬರು ಬೇಕಾಗಿದ್ದಾರೆ ಎಂದು ಎಲ್ಲೋ ಪ್ರಕಟಣೆ ಹೊರಡಿಸಿದ್ದು ಇವರ ಕಣ್ಣಿಗೆ ಬಿದ್ದಿತ್ತು. ಅದನ್ನು ನನಗೆ ಕೊಡಲೆಂದೇ ಎಸ್ಸಾರಾರ್ ಬಂದಿದ್ದರು. ‘ಅರ್ಜಿ ಹಾಕಿ, ಹೋಗಿ ಬನ್ನಿ; ನಿಮಗೆ ಆ ಹುದ್ದೆ ಸಿಕ್ಕರೆ ಭಾರತಕ್ಕೂ ಒಳ್ಳೇದುʼ ಎಂದು ತಮ್ಮ ಸಹಜ ತಣ್ಣನ್ನ ಸ್ವರದಲ್ಲಿ ಒತ್ತಾಯ ಹಾಕಿದರು. </p><p>ನಾನು ಅರ್ಜಿ ಹಾಕಿದೆ. ಆ ಹುದ್ದೆ ಬೇಕು ಅಂತೇನೂ ಅಲ್ಲ, ಪುಕ್ಕಟೆ ನೈರೋಬಿಗೆ ಹೋಗಿ ಬರಬಹುದು ಎಂಬುದೇ ನನ್ನ ಆಗಿನ ವಿಚಾರವಾಗಿತ್ತು. ಕೊನೆಗೂ ಅಷ್ಟೇ ಆಯಿತು ಅನ್ನಿ. ಸಂದರ್ಶನಕ್ಕೆ ಕರೆ ಬಂತು; ನನಗಿಂತ ಸ್ಮಾರ್ಟ್ ಆಗಿದ್ದ ದಿಲ್ಲಿಯ ರವಿ ಶರ್ಮಾ ಹೆಸರಿನವರೊಬ್ಬರಿಗೆ ಆ ಹುದ್ದೆ ಸಿಕ್ಕಿತು. ರಾಮಸ್ವಾಮಿಯವರ ನಿರೀಕ್ಷೆಯ ಮಟ್ಟಕ್ಕೆ ಏರಲಿಲ್ಲ ಎಂಬ ಬೇಸರ ಬಿಟ್ಟರೆ ಹುದ್ದೆ ಸಿಗದ್ದಕ್ಕೆ ಬೇಜಾರೇನೂ ಆಗಿರಲಿಲ್ಲ. </p><p>90ರ ದಶಕದಲ್ಲಿ ಚಳವಳಿಗಳ ಕಾವೆಲ್ಲ ಇಳಿದ ಮೇಲೆ, ಡಾ. ಶಿವರಾಮ ಕಾರಂತರು ಚುನಾವಣೆಯಲ್ಲಿ ಸೋತ ಮೇಲೆ, ಡಾ. ಕುಸುಮಾ ಸೊರಬ ಅವರು ರಸ್ತೆ ಅಪಘಾತದಲ್ಲಿ ಅಳಿದ ಮೇಲೆ, ಜಾಗತೀಕರಣದ ಸುನಾಮಿಯ ಅಬ್ಬರದಲ್ಲಿ ಯುವಜನರೆಲ್ಲ ವೃತ್ತಿಪರ ಕೋರ್ಸ್ಗಳಲ್ಲಿ, ಕಂಪ್ಯೂಟರ್ ಸಾಫ್ಟ್ವೇರ್ ರಂಗದಲ್ಲಿ ತೊಡಗಿಕೊಂಡ ಮೇಲೆ ನಮ್ಮಿಬ್ಬರ ಒಡನಾಟ ಕಡಿಮೆ ಆಗುತ್ತ ಬಂತು. ನಾವಿಬ್ಬರೂ ಪತ್ರಕರ್ತ/ಗ್ರಂಥಕರ್ತರೇ ಆಗಿದ್ದರೂ ನಮ್ಮಿಬ್ಬರ ದಾರಿ ಬೇರೆ ಬೇರೆಯೇ ಆಗತೊಡಗಿತ್ತು ಅನ್ನೋದೂ ನಿಜ. </p><p>ಅವರ ನೆನಪಿನ ಶಕ್ತಿಯೊ ಅದೆಷ್ಟು ಅಗಾಧ! ವರ್ಷಗಟ್ಟಲೆ ಅವರಿಗೆ ಒಂದು ಫೋನ್ ಕೂಡ ಮಾಡದೆ ಅಪರೂಪಕ್ಕೆ ಅನಿರೀಕ್ಷಿತವಾಗಿ ಭೇಟಿಯಾದಾಗಲೂ ‘ಬಕ್ಕೆಮನೆಗೆ ಹೋಗಿದ್ರಾ? ಶ್ರೀಪಾದ ಹೇಗಿದಾರೆ, ಉಮಾಪತಿಯ ಬಿಸಿನೆಸ್ ಹೇಗಿದೆ?ʼ ಎಂದು ನನ್ನ ತಮ್ಮಂದಿರ ಬಗ್ಗೆ ಅವರು ಕೇಳಿಯೇ ಸಿದ್ಧ. ನನ್ನ ಈಚಿನ ಲೇಖನಗಳ ಬಗ್ಗೆ ಪ್ರಸ್ತಾಪ ಮಾಡಿಯೇ ಸಿದ್ಧ. ನನ್ನ ಮಗ ಹೇಮಂತನ ಬಗ್ಗೆ ವಿಚಾರಿಸಿಯೇ ಸಿದ್ಧ. </p><p>ನಿವೃತ್ತನಾಗಿ ನಾನು ಕೆಂಗೇರಿಯ ಆಚೆ ಒಂದು ಪುಟ್ಟ ತೋಟವನ್ನು ರೂಪಿಸಿದ್ದು ಗೊತ್ತಾಗಿ, ತಮ್ಮ ಒಂದಿಬ್ಬರು ಯುವ ಶಿಷ್ಯರ ಜೊತೆ ಅಲ್ಲಿಗೂ ಬಂದು ಕೆಲ ಕಾಲ ಅಡ್ಡಾಡಿದರು. ಜಾಗತಿಕ ಪರಿಸರ ವಿದ್ಯಮಾನಗಳ ಬಗ್ಗೆ ಗೋಖಲೆ ಸಂಸ್ಥೆಯಲ್ಲಿ ನನ್ನದೂ ಒಂದು ಉಪನ್ಯಾಸ ಇಟ್ಟು ಗೌರವಿಸಿದರು. ನಾನು ಬೆಂಗಳೂರು ನಗರಕ್ಕೆ ಬರುವುದೇ ತೀರ ಕಡಿಮೆಯಾಗಿದ್ದರಿಂದ ಅವರ ನೇರ ಭೇಟಿ ಸಾಧ್ಯವಾಗುತ್ತಿಲ್ಲ. ಆದರೆ ಅವರು ರಚಿಸಿದ ಪಾಂಡಿತ್ಯಪೂರ್ಣ ಗ್ರಂಥಗಳೆಲ್ಲ ನನ್ನ ಕಪಾಟಲ್ಲಿ ಸಾಲಾಗಿ ಕೂತಿವೆ.</p><p>‘ರಾಮಸ್ವಾಮಿಯವರ ಆರೋಗ್ಯ ಹದಗಟ್ಟಿದೆ, ತೀರ ದುರ್ಬಲರಾಗಿದ್ದಾರೆʼ ಎಂದು ಆರೆಂಟು ವರ್ಷಗಳ ಹಿಂದೆ ಅನಂತ ಅಶೀಸರ ಅಥವಾ ವೈ.ಬಿ. ರಾಮಕೃಷ್ಣರಂಥ ಪರಿಸರಮಿತ್ರರು ತಿಳಿಸಿದಾಗ ನಾನು ನನ್ನನ್ನೇ ಶಪಿಸಿಕೊಳ್ಳುತ್ತ ಹೇಗೋ ಪುರುಸೊತ್ತು ಮಾಡಿಕೊಂಡು ಅವರನ್ನು ನೋಡಲೆಂದು ‘ಕೇಶವ ಕೃಪಾʼಕ್ಕೆ ಹೋದಾಗಲೆಲ್ಲ, ಅವರು ತನಗೇನೂ ಆಗಿಲ್ಲವೆಂಬಂತೆ, ‘ಕಾಯಿಲೆ ಕಸಾಲೆ ಇದೆಲ್ಲ ಬಿಡಿ, ಇದ್ದದ್ದೇ- ನಾವು ಅತ್ತ ಗಮನಕೊಡದಿದ್ದರೆ ಆಯಿತುʼ ಎನ್ನುತ್ತ ಸ್ಥಿತಪ್ರಜ್ಞತೆಯನ್ನು ಮೆರೆಯುತ್ತ ಎಂದಿನಂತೆ, ತಲೆತಗ್ಗಿಸಿ ರಾಷ್ಟ್ರೋತ್ಥಾನ ಸಾಹಿತ್ಯವನ್ನು ಉಜ್ವಲಗೊಳಿಸುವ ಕೆಲಸದಲ್ಲಿ ಮಗ್ನರಾಗುವುದನ್ನು ನಾನು ನೋಡಿದ್ದೇನೆ. ನಮ್ಮ ಭೇಟಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರ್ಭಗುಡಿಯಲ್ಲೇ ಆಗುತ್ತಿದ್ದರೂ ಅಪ್ಪಿತಪ್ಪಿ ಕೂಡ ಆರೆಸ್ಸೆಸ್ನ ಧ್ಯೇಯ ಧೋರಣೆಗಳ ಬಗ್ಗೆ ಒಂದು ಮಾತನ್ನೂ ಆಡಿರಲಿಲ್ಲ. ನಮ್ಮ ಸಂವಾದ ಏನಿದ್ದರೂ ಗ್ಲೋಬಲ್ ಎಕಾನಮಿ, ಪರಿಸರ ಸಂರಕ್ಷಣೆ, ಸರ್ಕಾರೇತರ ಸಂಘಟನೆ ಇತ್ಯಾದಿಗಳ ಬಗ್ಗೆ ಇದ್ದವು. </p><p>ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಅವರ ಅಮೋಘ ಪಾಂಡಿತ್ಯ, ನವಭಾರತದ ರೂವಾರಿಗಳ ಕುರಿತ ಅವರ ಅಗಾಧ ತಿಳುವಳಿಕೆ, ಅಚ್ಚಳಿಯದ ನೆನಪಿನ ಶಕ್ತಿ, ಯಾವ ಕ್ಷಣದಲ್ಲೂ ತಣ್ಣಗೆ ಚಿಮ್ಮಬಲ್ಲ ಹಾಸ್ಯಪ್ರಜ್ಞೆ ಇವೆಲ್ಲವುಗಳ ತವನಿಧಿಯಾಗಿರುವ ಅವರು ನನ್ನ ಹಿರಿಯ ಗೆಳೆಯ, ಹಿತೈಷಿ ಅಷ್ಟೇ ಅಲ್ಲ, ನಾನು ಮನಃಪೂರ್ವಕವಾಗಿ ತಲೆಬಾಗಬಯಸುವ ಏಕೈಕ ಸಂತ. ಅದರಲ್ಲೇನೂ ಅನುಮಾನವಿಲ್ಲ. </p><p>ನನ್ನ ಪತ್ರಿಕಾವೃತ್ತಿಯ ಆರಂಭದ ದಿನಗಳಲ್ಲಿ ನನಗೊಂದು ಖಚಿತ ದಿಶಾನಿರ್ದೇಶನ ಕೊಟ್ಟವರು, ಅಧ್ಯಯನಶೀಲತೆಯ ಮಹತ್ವವನ್ನು ತಮ್ಮ ಮೆಲುಮಾತಿಗಳಲ್ಲಿ ತಿಳಿಸಿದವರು ರಾಮಸ್ವಾಮಿಯವರು. ಚಳವಳಿ, ಹೋರಾಟ, ಪ್ರತಿರೋಧದ ಅಂತಸ್ಸತ್ವ ನನ್ನಲ್ಲಿ ಗಟ್ಟಿಯಾಗಲು ಅವರು ಕಾರಣರು. ಆಳುವ ಪಕ್ಷ ಯಾವುದೇ ಇರಲಿ, ಪತ್ರಕರ್ತ ಸದಾಕಾಲ ಪ್ರತಿಪಕ್ಷದಲ್ಲೇ ಇರಬೇಕೆಂಬ ನಿಲುವು ನನ್ನಲ್ಲಿ ಹರಳುಗಟ್ಟಲು ಅವರು ಕಾರಣರು.</p><p>[ಇಂದು (ಶುಕ್ರವಾರ) ಅಗಲಿದ ನಾಡೋಜ ಎಸ್. ಆರ್. ರಾಮಸ್ವಾಮಿಯವರ ಗೌರವಗ್ರಂಥಕ್ಕೆ ಮೂರು ವರ್ಷಗಳ ಹಿಂದೆ ನಾನು ಬರೆದಿದ್ದ ಲೇಖನದ ಭಾಗ ಇದು: ಅವರ ಬಯೊಡಾಟಾ ಇದಲ್ಲ.]</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>