ಎಚ್ಎಂಟಿ, ಮೋನ-ರಾಗು ಜಂಗೀ ಕುಸ್ತಿಯಲ್ಲಿ ನನ್ನತ್ರ ವೋಟು ಕೇಳಕ್ಕೆ ಯಾರೂ ಬಂದಿಲ್ಲವಲ್ಲ ಅಂತ ಕಸಿವಿಸಿಯಾಗ್ತಿತ್ತು. ಇದಕ್ಕೆ ಕಾರಣ ಏನು ಅಂತ ಹುಡುಕಿಕೊಂಡು ಹೊರಟಾಗ, ಹಾಸನದಲ್ಲಿ ಡೇರಣ್ಣ ಇರಬರ ನಿಂಬೇಹಣ್ಣೆಲ್ಲಾ ತಗತಿದ್ರು. ಹೆಂಗನ್ನ ಇರಲಿ ಅಂತ ನನ್ನ ನೋವು ತೋಡಿಕೊಂಡೆ. ಅವರು ‘ನೀನು ಮೂರು ಕ್ಯಾಟಗರಿಲೀ ಯಾವುದ್ರಾಗಿದ್ದೀಯ?’ ಅಂದ್ರು. ನನಗೆ ಅರ್ಥವಾಗದೇ ಪೆಚ್ಚಾದೆ.