ಪೆದ್ದಪಲ್ಲಿ ಹತ್ತಿರದ ಶಿಲೆಗಳನ್ನು ಜಿ.ಎಸ್.ಐ 1974ರಲ್ಲಿಯೇ ಭಾರತೀಯ ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿದೆ. ಇನ್ನುಳಿದಂತೆ, ಕರ್ನಾಟಕದಲ್ಲಿ ಬೇರೆಬೇರೆ ರೀತಿಯ ಮೂರು ಭಾರತೀಯ ಭೂವೈಜ್ಞಾನಿಕ ಸ್ಮಾರಕಗಳಿವೆ. ಒಂದು, ಚಿತ್ರದುರ್ಗದ ಮರಡಿಹಳ್ಳಿಯ ಹತ್ತಿರ ದೊರಕುವ ಪಿಲ್ಲೊ ಲಾವಾ. ಸಮುದ್ರದ ಕೆಳಗೆ ಭೂಗರ್ಭದಿಂದ ಮ್ಯಾಗ್ಮ ಉಕ್ಕಿ ನೀರಿಗೆ ಬಿದ್ದಾಗ, ತಲೆದಿಂಬಿನ ಆಕಾರದ ಈ ಲಕ್ಷಾಂತರ ಶಿಲೆಗಳು ರೂಪುಗೊಂಡಿವೆ. ಕೆಜಿಎಫ್ ಗಣಿ ಪ್ರದೇಶದ ಮಧ್ಯೆ ಮತ್ತು ಕೆಜಿಎಫ್ ದಕ್ಷಿಣದಲ್ಲಿರುವ ವಿರೂಪಾಕ್ಷಿಪುರಂ ಹತ್ತಿರದಲ್ಲೂ ಕೆಲವು ಪಿಲ್ಲೊ ಲಾವಾಗಳು ದೊರಕುತ್ತವೆ. ಎರಡು, ದಕ್ಷಿಣ ಕನ್ನಡದ ಸೇಂಟ್ ಮೇರಿಸ್ ದ್ವೀಪಗಳ ಗುಂಪಿನ ಕೋಕೊನಟ್ ದ್ವೀಪದಲ್ಲಿ ದೊರಕುವ ಸ್ತಂಭಾಕೃತಿಯ ಕಲ್ಮನಾರ್ ಜಾಯಿಂಟ್ಗಳು. ಇವು ಕೂಡ ಸಮುದ್ರದ ಕೆಳಗೆ ಉಕ್ಕಿ ಬರುವ ಬಸಾಲ್ಟ್ ಶಿಲೆಗಳಿಂದ ರೂಪುಗೊಂಡಂತಹವು. ಇನ್ನು ಮೂರನೆಯದು, ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಗೋಪುರದ ಕೆಳಗಿರುವ ಪೆನಿನ್ಸುಲಾರ್ ನೈಸಸ್ ಶಿಲೆಗಳು. ಇವು 300 ಕೋಟಿ ವರ್ಷಗಳ ಹಿಂದೆ ಭೂಮಿಯಿಂದ ಸ್ಫೋಟಗೊಂಡ ಅಗ್ನಿಶಿಲೆಗಳಿಂದ ರೂಪುಗೊಂಡವು.ಹೀಗಿರುವಾಗ, ಸರಿಯಾಗಿ ವಿಷಯ ತಿಳಿದುಕೊಳ್ಳದೆ, ತಜ್ಞರನ್ನು ಮಾತನಾಡಿಸದೇ ಸುದ್ದಿ ಹರಡುವುದು ಸಮಾಜಕ್ಕೆ ಒಳಿತಲ್ಲ.