ಬಂದ್ ಕರೆ ಕೈಬಿಡಲು ಪ್ರಧಾನಿ ಸಲಹೆ– ಮುಲಾಯಂ ತಿರಸ್ಕಾರ
ನವದೆಹಲಿ, ಸೆ. 12 (ಯುಎನ್ಐ, ಪಿಟಿಐ)– ಆಡಳಿತಾರೂಢ ಸಮಾಜವಾದಿ ಪಕ್ಷ– ಬಹುಜನ ಸಮಾಜ ಪಕ್ಷಗಳು ನಾಳೆ ಉತ್ತರ ಪ್ರದೇಶ ಬಂದ್ಗೆ ನೀಡಿರುವ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಸಲಹೆಯನ್ನು ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂದು ತಿರಸ್ಕರಿಸಿರುವ ಪರಿಣಾಮವಾಗಿ 10 ತಿಂಗಳುಗಳ ಯಾದವ್ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ.