ಬೆಂಗಳೂರು, ಮಾರ್ಚ್ 3– ಕಂಬಳಿ ಹೊದಿಕೆ ಹೊದ್ದು ರಾತ್ರಿಯಿಂದಲೇ ರಸ್ತೆಯ ಮಗ್ಗುಲಿನಲ್ಲಿ ಬೀಡು ಬಿಟ್ಟಿದ್ದ ಸಹಸ್ರಾರು ಕ್ರಿಕೆಟ್ ಪ್ರೇಮಿಗಳು ಟಿಕೆಟ್ ಸಿಗದೆ ನಿರಾಶರಾದರು. ತಮಗಾದ ಅನ್ಯಾಯವನ್ನು ಪ್ರತಿಭಟಿಸಿ ನೂರಾರು ಜನ ಕಬ್ಬಿಣದ ಗೇಟುಗಳನ್ನು ಮುರಿದು ಕ್ರೀಡಾಂಗಣದ ಒಳಗೆ ನುಗ್ಗಿದರು.ಉದ್ರಿಕ್ತ ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.