ನವದೆಹಲಿ, ಡಿ. 13 (ಯುಎನ್ಐ)– ರಮೇಶ್ ಭಂಡಾರಿ ಪ್ರಕರಣ ಹಾಗೂ ಹರ್ಷದ್ ಮೆಹ್ತಾ ಅವರು ಪಿ.ವಿ. ನರಸಿಂಹ ರಾವ್ ಅವರಿಗೆ ಒಂದು ಕೋಟಿ ರೂ. ರುಷುವತ್ತು ನೀಡಿರುವುದಾಗಿ ಹೇಳಿರುವ ಪ್ರಕರಣಗಳ ಬಗ್ಗೆ ಪ್ರತ್ಯೇಕ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೋರಿಕೆ ಸಲ್ಲಿಸಿ ಷೇರು ಹಗರಣದ ತನಿಖೆ ನಡೆಸಿರುವ ಜಂಟಿ ಸಂಸದೀಯ ಸಮಿತಿಯ 13 ಮಂದಿ ಕಾಂಗೈಯೇತರ ಸದಸ್ಯರು ಸಮಿತಿಯ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದಾರೆ.