ನವದೆಹಲಿ, ಅ. 1– ಇಪ್ಪತ್ತೆರಡು ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಗಡಿನಾಡು ಗಾಂಧಿ ಖಾನ್ ಅಬ್ದುಲ್ ಗಫಾರ್ಖಾನರಿಗೆ ಬುಧವಾರ ರಾಜಧಾನಿ ದೆಹಲಿ ಐತಿಹಾಸಿಕ ಸ್ವಾಗತ ನೀಡಿತು. ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಪಾಲಂ ನಿಲ್ದಾಣದಲ್ಲಿ ಬಾದಷಹಾಖಾನರು ಬಂದ ವಿಶೇಷ ವಿಮಾನದ ಏಣಿ ಏರಿ ನಿಸ್ಸೀಮ ಸತ್ಯಾಗ್ರಹಿಯನ್ನು ಆದರದಿಂದ ಬರಮಾಡಿಕೊಂಡರು.