ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 19–11–1971

Last Updated 18 ನವೆಂಬರ್ 2021, 15:49 IST
ಅಕ್ಷರ ಗಾತ್ರ

ನವದೆಹಲಿ, ನ. 18– ಮೈಸೂರು ರಾಜ್ಯದಲ್ಲಿ ನವೆಂಬರ್‌ 25ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಲು ಲೋಕಸಭೆಯು ಇಂದು ಒಪ್ಪಿಗೆ ಕೊಟ್ಟಿತು.

ಇದಕ್ಕೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಕೆ.ಸಿ.ಪಂತ್ ಅವರು ಮಂಡಿಸಿದ ಶಾಸನಬದ್ಧ ನಿರ್ಣಯವನ್ನುಸ್ವಲ್ಪಕಾಲ ಚರ್ಚಿಸಿದ ನಂತರ ಸಭೆಯು ಅಂಗೀಕರಿಸಿತು.

ಅಂತರರಾಜ್ಯ ಜಲ ವಿವಾದವನ್ನು ಬಗೆಹರಿಸಲು ಮೈಸೂರು ರಾಜ್ಯಪಾಲರು ಪ್ರಯತ್ನಿಸುವುದು ಯುಕ್ತವಾಗುವುದಿಲ್ಲ ಎಂದುಪಂತ್‌ ಹೇಳಿದರು.

ಅಕ್ಕಪಕ್ಕದ ರಾಜ್ಯಗಳೊಡನೆ ಚರ್ಚೆ ನಡೆಸುವುದು ಮತ್ತು ವಿವಾದವನ್ನು ಬಗೆಹರಿಸುವುದು ಚುನಾಯಿತ ಸರ್ಕಾರಕ್ಕೆ ಮಾತ್ರ ಸಾಧ್ಯ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT