ಬೆಂಗಳೂರು, ನ. 12– ತಜ್ಞರ ತಂಡದೊಂದಿಗೆ ಕುದುರೆಮುಖ ಕಬ್ಬಿಣದ ಅದುರಿನ ನಿಕ್ಷೇಪ ಹಾಗೂ ಅಲ್ಲಿಂದ 40 ಮೈಲಿಗಳ ದೂರವಿರುವ ಮಂಗಳೂರು ಸರ್ವಋತು ಬಂದರು ನಿವೇಶನವನ್ನು ವಿಮಾನದಲ್ಲಿ ಸಮೀಕ್ಷೆ ನಡೆಸಿದ ಜಪಾನಿನ ಉಕ್ಕು ಉದ್ಯಮದ ನಾಯಕ ಶ್ರೀ ಷಿಗಿಯೋ ನಗಾನೋ ಅವರು, ಅಂತಿಮವಾಗಿ ಸುಮಾರು ನೂರು ಕೋಟಿ ರೂಪಾಯಿಗಳ ವೆಚ್ಚ ಬರುವ ಅದುರು ಅಭಿವೃದ್ಧಿ ಯೋಜನೆಯನ್ನು ಒಟ್ಟಿನಲ್ಲಿ ಒಪ್ಪಿಕೊಂಡಂತಿದೆ.