ಒಂದಿಷ್ಟು ಮಂದಿ ಊರು, ಕೇರಿ, ನಗರದ ಹೆಸರು ಬದಲಿಸೂದ್ರಾಗ ಮುಳುಗಿದ್ರು. ದೀನ ದಯಾಳ್ ಉಪಾಧ್ಯಾಯರು ರೈಲ್ವೆಸ್ಟೇಷನ್ನಾಗ ಕುಂತಿದ್ರು. ಆಗ್ರಾ– ಅಗ್ರಸೇನ, ತಾಜಮಹಲ್ ಅಗ್ರವನ್ ಆಗಬೇಕು, ಮುಜಫ್ಪರನಗರಕ್ಕ ಬೆಂಕಿಹಚ್ಚಿ ಕುಣದಾಂವಾ ಲಕ್ಷ್ಮಿನಗರ ಬೇಕು ಅಂತಿದ್ದ. ಗಾಂಧೀಜಿ ಊರು ಅಹಮದಾಬಾದು– ಕರ್ಣಾವತಿ ಅಂತ ಇನ್ನೊಬ್ಬ, ಕೇಂದ್ರ ಗೃಹ ಸಚಿ ವಾಲಯದ ಟೇಬಲ್ ಮ್ಯಾಲ ಹೆಸರ ಬದಲಿಸಾಕ ಬಂದ ಅರ್ಜಿಗಳು ಉರುಳಾಡತಿದ್ವು. ‘ಇನ್ನಟ ಹೊತ್ತು ಇಲ್ಲಿದ್ರ ನಮಗss ಹುಚ್ಚ ಹಿಡಿತೇತಿ ನಡಿರಲೇ, ನಮ್ಮ ಗಾಂಧಿ ಮುತ್ಯಾನ ಆಶ್ರಮನ ನಮಗ ಪಾಡು’ ಅಂತ ಟಣ್ಣಂತ ಜಿಗಿದವು ಅಲ್ಲಿಂದ…