ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಐವತ್ತನೆಯ ಸಮಾವೇಶದಲ್ಲಿ ಮಾತನಾಡಿದ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು, ಬಾಹ್ಯ ಶಕ್ತಿಗಳ ಬೆಂಬಲ ಮತ್ತು ಸಹಾಯದಿಂದ ನಡೆಯುತ್ತಿರುವ ಭಯೋತ್ಪಾದನೆ ಭಾರತದ ಭೌಗೋಳಿಕ ಸಮಗ್ರತೆಗೆ ಸವಾಲು ಒಡ್ಡಿದ್ದು, ರಾಷ್ಟ್ರ ನಿರ್ಮಾಣದ ಮೂಲಭೂತ ಕಾರ್ಯದಿಂದ ವಿಮುಖಗೊಳಿಸುವ ಉದ್ದೇಶ ಹೊಂದಿದೆ ಎಂದು ಆಪಾದಿಸಿದರು.