ಬೆಂಗಳೂರು, ಫೆ. 9– ರೈತರ ಹಿತದೃಷ್ಟಿಯಿಂದ ನಡೆದ ಚರ್ಚೆ ವೈಯಕ್ತಿಕ ನೆಲೆಗೆ ತಿರುಗಿದ ಪರಿಣಾಮವಾಗಿ ನೊಂದ ಶಾಸಕರೊಬ್ಬರು ಕಣ್ಣೀರಿಟ್ಟು, ರಾಜೀನಾಮೆವರೆಗೂ ಮುಂದಾದ ಪ್ರಸಂಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ– ವಾಗ್ವಾದಕ್ಕೆ ಕಾರಣವಾಗಿ, ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದರಿಂದ ಸದನ ಮುಂದೂಡಿದ ಅಪರೂಪದ ಘಟನೆ ಇಂದು ವಿಧಾನಸಭೆಯಲ್ಲಿ ನಡೆಯಿತು.