ಅಂಚೆ ಇಲಾಖೆಯ ಮೇಲೆ ಜನಸಾಮಾನ್ಯರು ಇಟ್ಟಿರುವ ವಿಶ್ವಾಸ ಇನ್ನೂ ಪೂರ್ತಿ ನಶಿಸಿಲ್ಲ ಎಂದು ಚೆನ್ನು ಅ. ಹಿರೇಮಠ ಅವರು ಹೇಳಿರುವುದು (ಸಂಗತ, ಆ. 26) ಸತ್ಯವಾದ ಮಾತು. ಆದರೆ ಪತ್ರಗಳನ್ನು ಬಟವಾಡೆ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ, ಸಂಬಂಧಪಟ್ಟ ಜಿಲ್ಲಾ ಅಂಚೆ ಅಧಿಕಾರಿಗಳು ಅವರಿಗೆ ಎಚ್ಚರಿಕೆ ಕೊಟ್ಟು, ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.