ರಾಜ್ಯದ ಬಹುತೇಕ ಐತಿಹಾಸಿಕ ಸ್ಥಳಗಳಲ್ಲಿ ಅಪಾಯಕಾರಿಯಾದ ಹೊಂಡ, ಬಾವಿ, ನದಿ ಇರುವುದು ಸಾಮಾನ್ಯ. ಪ್ರವಾಸಿ ತಾಣಗಳಾಗಿರುವುದರಿಂದ ಅನೇಕ ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಪಾಯಕಾರಿ ಸ್ಥಳಗಳಿಗೆ ಹೋಗಿ ಅನೇಕರು ಸಾವನ್ನಪ್ಪುತ್ತಲೇ ಇದ್ದಾರೆ.
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸಿದ್ಧರ ಬೆಟ್ಟದಲ್ಲಿ ಇತ್ತೀಚೆಗೆಒಂದೇ ಕುಟುಂಬದ ನಾಲ್ವರು ಸದಸ್ಯರು ಹಾಗೂ ಚಿತ್ರದುರ್ಗದಲ್ಲಿ ಒಬ್ಬ ಮಹಿಳೆ ಹೊಂಡಕ್ಕೆ ಬಿದ್ದುಮೃತಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಹುಚ್ಚಂಗಿದುರ್ಗದಲ್ಲಿ ಖಾಸಗಿ ಬಸ್ ಹೊಂಡಕ್ಕೆ ಬಿದ್ದು ಸುಮಾರು ಜನ ಮೃತಪಟ್ಟಿದ್ದರು. ಆದರೂ ಇಂತಹ ಘಟನೆಗಳು ಇಂದಿಗೂ ನಡೆಯುತ್ತಲೇ ಇರುವುದು ವಿಷಾದನೀಯ.
ಸಂಬಂಧಪಟ್ಟ ಇಲಾಖೆ ಅಂತಹ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ಜನರಿಗೆ ಮಾಹಿತಿ ನೀಡಬೇಕು. ಅಪಾಯಕಾರಿ ಸ್ಥಳಗಳಲ್ಲಿ ಕಾವಲುಗಾರರನ್ನು ನೇಮಿಸಿ, ಅವಘಡಗಳನ್ನು ತಪ್ಪಿಸಬೇಕು.