ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಶರಾವತಿ ಹಾಗೂ ಅಘನಾಶಿನಿ ನದಿ ಕಣಿವೆಗಳ ಅರಣ್ಯ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಅಭಯಾರಣ್ಯಕ್ಕೆ ಸೇರ್ಪಡೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೆಲ ಪರಿಸರವಾದಿಗಳು, ತಜ್ಞರು, ರೈತರು, ಅಧ್ಯಾಪಕರು ತಕರಾರು ಎತ್ತಿದ್ದಾರೆ (ವಾ.ವಾ., ಜೂನ್ 13). ಒಂದೆಡೆ, ಅರಣ್ಯಗಳು, ವನ್ಯಜೀವಿಗಳು ಉಳಿಯಬೇಕೆಂದು ಹೇಳುವ ಇವರು, ಜೀವವೈವಿಧ್ಯ ಉಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಸರ್ಕಾರದ ಈ ಅಪರೂಪದ ನಿರ್ಧಾರವನ್ನು ವಿರೋಧಿಸುತ್ತಿರುವುದು ವಿರೋಧಾಭಾಸದಿಂದ ಕೂಡಿದೆ.