ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ 15ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಇರುವುದಕ್ಕೆ ಆ ಗ್ರಾಮದ ದುರ್ಗಮ ರಸ್ತೆಯೇ ಕಾರಣವಾಗಿರುವ ಸುದ್ದಿ ತಿಳಿದವರು (ಪ್ರ.ವಾ., ಜೂನ್ 12) ಅಯ್ಯೋ ಎನ್ನದೇ ಇರಲಾರರು. ಈಗಿನ ಕಾಲದಲ್ಲಿ ಹೆಣ್ಣು ಹೆತ್ತವರ ನಿರೀಕ್ಷೆಗಳು ಬಹಳಷ್ಟಿರುತ್ತವೆ. ಹೀಗಿರುವಾಗ, ಗ್ರಾಮದ ಭೌಗೋಳಿಕ ಹಿನ್ನೆಲೆಯೂ ಹುಡುಗರ ಮದುವೆಗೆ ತೊಡಕಾಗಿ ಪರಿಣಮಿಸಿರುವುದು ಅವರ ದುರದೃಷ್ಟವೇ ಸರಿ. ಜನನಾಯಕರು ಇಂತಹ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಂಡು, ಯುವಕರಿಗೆ ಅಕ್ಷತೆಯ ಭಾಗ್ಯ ಕರುಣಿಸಲಿ. -ಯೋಗೇಶ್ ವೈ.ಸಿ., ಮಂಡ್ಯ