‘ಅವಿತಿಟ್ಟ ಅಂಬೇಡ್ಕರ್’ ಎನ್ನುವ ಪುಸ್ತಕವನ್ನು ಕಳೆದ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು, ‘ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಪ್ರಯತ್ನಿಸಿದ್ದೇಕೆ’ ಎನ್ನುವ ಪ್ರಶ್ನೆ ಈಗಲೂ ಕಾಡುತ್ತಿದೆ ಎಂದಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ‘ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರಕ್ಕೆ ಹೋದಾಗ ಅವರನ್ನು ಹಿಡಿದು ಜೈಲಿಗಟ್ಟಲಾಗಿತ್ತು. ವಾರದ ನಂತರ ಅವರ ನಿಧನದ ಸುದ್ದಿ ಹೊರಬಿದ್ದಿತ್ತು. ಅವರ ಬಲಿದಾನದ ಬಗ್ಗೆ ಶಾಲಾ ಪಠ್ಯ ಸೇರಿದಂತೆ ಎಲ್ಲಿಯೂ ಕಾಣುವುದಿಲ್ಲ’ ಎನ್ನುವ ಆರೋಪವನ್ನು ಕೂಡ ಅವರು ಮಾಡಿದ್ದಾರೆ.