ಚಾಮರಾಜನಗರದಲ್ಲಿ ಇತ್ತೀಚೆಗೆ ಒಂದೇ ದಿನ 24 ಕೋವಿಡ್ ರೋಗಿಗಳು ಮೃತಪಟ್ಟ ದುರಂತಕ್ಕೆ ಆಮ್ಲಜನಕದ ಕೊರತೆಯೇ ಕಾರಣ ಎಂದು, ಹೈಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿಯು ವರದಿ ನೀಡಿದೆ (ಪ್ರ.ವಾ., ಮೇ 13). ಇದರಿಂದ, ಸತ್ಯಕ್ಕೆ ಸಾವಿಲ್ಲ ಎಂಬುದು ತಿಳಿಯುತ್ತದೆ. ಆಮ್ಲಜನಕದ ಕೊರತೆಯಿಂದ ಕೇವಲ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾಗಿ ಈ ಮೊದಲು ಆರೋಗ್ಯ ಸಚಿವರು ಹೇಳಿದ್ದರು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅಧಿಕಾರಿಗಳು, ಶಾಸಕರು ಹಾಗೂ ಸಚಿವರ ವಿಭಿನ್ನ ಹೇಳಿಕೆಗಳು ಗೊಂದಲ ಮೂಡಿಸುತ್ತವೆ. ಆದ್ದರಿಂದ ಹೇಳಿಕೆಗಳನ್ನು ಕೊಡುವಾಗ ಎಲ್ಲರೂ ಜಾಗೃತರಾಗಿದ್ದರೆ ಇಂತಹ ಗೊಂದಲವನ್ನು ತಪ್ಪಿಸಲು ಸಾಧ್ಯ.