ಇಂದು ನಮ್ಮ ಲಕ್ಷಾಂತರ ಯುವಕ, ಯುವತಿಯರು ಯಾರದೋ ಬಾಹ್ಯ ಒತ್ತಡಗಳಿಗೆ ಮಣಿದು ತಮ್ಮ ನಿಜವಾದ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪಕ್ಕಕ್ಕೆ ಇಟ್ಟು, ಕೇವಲ ಸರ್ಕಾರಿ ಉದ್ಯೋಗಕ್ಕಾಗಿ (ಸಿಗುವುದು ಅಪರೂಪ) ಅಮೂಲ್ಯವಾದ ತಮ್ಮ ಎಷ್ಟೋ ವರ್ಷಗಳನ್ನು ಮುಡಿಪಾಗಿ ಇಡುತ್ತಿದ್ದಾರೆ. ಕೃಷಿ ಮತ್ತು ಸ್ವಂತ ವ್ಯಾಪಾರ–ಉದ್ದಿಮೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ನಾನಾ ಅವಕಾಶಗಳು ಇದ್ದರೂ ಆ ನಿಟ್ಟಿನಲ್ಲಿ ಅವರು ಮನಸ್ಸು ಮಾಡದೇ ಇರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಅಣ್ಣಾಮಲೈ ಅವರ ರಾಜೀನಾಮೆ ಮುನ್ನುಡಿ ಬರೆಯುವಂತಾಗಲಿ.