ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಎರಡು ಘಟನೆಗಳ ಕುರಿತು ರವೀಂದ್ರ ಭಟ್ಟ ಅವರು ಬರೆದ ‘ಬೆತ್ತಲಾಗುತ್ತಲೇ ಇದೆ ಮನುಷ್ಯತ್ವ’ (ಪ್ರ.ವಾ., ಜೂನ್ 25) ಅಂಕಣವು ಸಮಾಜದ ನಿಜವಾದ ಬೆತ್ತಲೆಯ ಚಿತ್ರಣವನ್ನು ನೀಡುತ್ತದೆ. ದೇವಾಲಯವನ್ನು ‘ಅಪವಿತ್ರ’ಗೊಳಿಸಿದ ಎಂಬ ಕಾರಣಕ್ಕೆ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿದ್ದು, ಬಡ್ಡಿ ಹಣ ವಸೂಲಾತಿಗಾಗಿ ಕುಟುಂಬವೊಂದರ ಹೆಣ್ಣುಮಗುವನ್ನೇ ಒತ್ತೆ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸಿರುವುದು ನಾಗರಿಕರು ಅರಗಿಸಿಕೊಳ್ಳಲಾರದಂತಹ ಘಟನೆಗಳು.