ಮಹಾರಾಷ್ಟ್ರ ತನ್ನ ರಾಜಕೀಯ ಲಾಭದ ಸಲುವಾಗಿ ಭಾಷೆ ಮತ್ತು ಗಡಿಯಂತಹ ಭಾವನಾತ್ಮಕ ವಿಚಾರಗಳನ್ನು ಪದೇ ಪದೇ ಪ್ರಸ್ತಾಪಿಸುತ್ತದೆ. ಬೆಳಗಾವಿ ಕರ್ನಾಟಕದಲ್ಲಿ ಸೇರಿಹೋಗಿದೆ ಎಂದು ಮಹಾರಾಷ್ಟ್ರ ಹೇಗೆ ಹೇಳುತ್ತದೆಯೋ ಅದೇ ರೀತಿ ಕರ್ನಾಟಕದ ಎಷ್ಟೋ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಸೇರಿಹೋಗಿರುವ ಕುರಿತು ಕರ್ನಾಟಕ ಬಲವಾಗಿ ಪ್ರತಿಪಾದನೆ ಮಾಡಬೇಕಾಗಿದೆ.
ಗಡಿಗೆ ಸಂಬಂಧಿಸಿದ ವಿಷಯವನ್ನು ಸರಿಯಾಗಿ ಅಧ್ಯಯನ ಮಾಡಿ, ನಮ್ಮ ಪ್ರದೇಶಗಳು ಸಹಿತ ಮಹಾರಾಷ್ಟ್ರ ದಲ್ಲಿವೆ ಎಂದು ಮಹಾರಾಷ್ಟ್ರದ ಹೇಳಿಕೆಗೆ ಪ್ರತಿಯಾಗಿ ಪ್ರತಿಪಾದಿಸಬೇಕು. ಈ ಪ್ರದೇಶಗಳನ್ನು ನಮಗೆ ಮರಳಿಸಬೇಕು ಎಂದು ನಾವೂ ಹೋರಾಟ ಮಾಡಿದರೆ ಬಹುಶಃ ಮಹಾರಾಷ್ಟ್ರದ ಇಂತಹ ಜಗಳಗಂಟ ಪ್ರವೃತ್ತಿ ಕಡಿಮೆಯಾಗಬಹುದು.