ಅಯೋಧ್ಯೆಯ ಜಮೀನು ವಿವಾದ ಪರಿಹಾರಕ್ಕಾಗಿ ಕಾಯುತ್ತಾ, 27 ವರ್ಷಗಳಿಂದಲೂ ಅನ್ನಾಹಾರ ತ್ಯಜಿಸಿ ಕೇವಲ ಫಲಾಹಾರ ಸೇವಿಸುತ್ತಿದ್ದ ಮಧ್ಯಪ್ರದೇಶದ ಸಂಸ್ಕೃತ ಭಾಷಾ ಶಿಕ್ಷಕಿ ಊರ್ಮಿಳಾ ಚತುರ್ವೇದಿ ಅವರ ದೃಢ ಸಂಕಲ್ಪ ತಿಳಿದು (ಪ್ರ.ವಾ., ನ. 12) ಅಚ್ಚರಿಯಾಯಿತು.
ಸಮಾಜ ಮತ್ತು ದೇಶದ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿ ಮತ್ತು ಕುಟುಂಬದಹಿತಾಸಕ್ತಿಯೇ ಮುಖ್ಯ ಎನ್ನುವವರ ನಡುವೆ, ಅವೆಲ್ಲವನ್ನೂ ಬದಿಗೊತ್ತಿ ಶಿಕ್ಷಕಿ ಕೈಗೊಂಡಿದ್ದ ಈ ನಿರ್ಧಾರ ಶ್ಲಾಘನೀಯ. ಊರ್ಮಿಳಾ ಅವರ ಉಪವಾಸದ ಅವಧಿಯಲ್ಲಿಯೇ ವಿವಾದ ಇತ್ಯರ್ಥಗೊಂಡಿರುವುದು ಖುಷಿಯ ವಿಚಾರ.