ನಾಗರಿಕತೆ ಬೆಳೆದು ವಿಜ್ಞಾನ ದೇದೀಪ್ಯಮಾನವಾಗಿ ಕಣ್ಣರಳಿಸಿದ್ದರೂ ಜನರ ಮನೋಭಾವ ಬದಲಾಗುತ್ತಿಲ್ಲ. ರಥೋತ್ಸವಗಳಲ್ಲಿ ಬಾಳೆಹಣ್ಣುಗಳನ್ನು ಭಕ್ತಿಪರವಶರಾಗಿ ತೂರುವ ರೂಢಿ ನಿಂತಿಲ್ಲ. ಹೀಗೆ ಬಾಳೆಹಣ್ಣನ್ನು ತೂರಿ ಮಣ್ಣುಪಾಲು ಮಾಡುವ ಬದಲು ಹೊಸದೊಂದು ಸಂಪ್ರದಾಯ ಸೃಜಿಸಿ, ಅದೇ ಬಾಳೆಹಣ್ಣುಗಳನ್ನು ಸಂಗ್ರಹಿಸಿ ಶಾಲೆಗಳು ಹಾಗೂ ಅನಾಥಾಲಯಗಳಿಗೆ ತಲುಪಿಸಿದರೆ, ಅಪೌಷ್ಟಿಕತೆಯಿಂದ ನರಳುವ ಮಕ್ಕಳು ತಿಂದು ದೃಢವಾಗುತ್ತಾರಲ್ಲವೇ?