ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ವಾರ್ಡ್ ವ್ಯಾಪ್ತಿಯ ಮದ್ದೂರಮ್ಮ ಮೈದಾನದಲ್ಲಿ ಶಾಲೆ ನಿರ್ಮಾಣವಾಗುತ್ತಿರುವುದರ ಕುರಿತು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿರುವುದು ವರದಿಯಾಗಿದೆ
(ಪ್ರ.ವಾ., ಡಿ. 4). ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ಬೆಂಗಳೂರಿನಲ್ಲಿ ಕ್ರೀಡೆಗಳಿಗೆಂದು ಮೀಸಲಿಟ್ಟ ಮೈದಾನಗಳು ಅನ್ಯ ಉದ್ದೇಶಗಳಿಗೆ ಧಾರಾಳವಾಗಿ ಬಳಕೆಯಾಗುತ್ತಿವೆ. ಸಭೆ, ಸಮಾರಂಭಗಳಿಗಾಗಿ ಆಟದ ಮೈದಾನಗಳ ಅತಿಕ್ರಮಣ ತಾತ್ಕಾಲಿಕ ಸ್ವರೂಪದ್ದಾದರೆ, ಸರ್ಕಾರದ ಕಚೇರಿಗಾಗಿ, ಶಾಲೆಗಳಿಗಾಗಿ, ಶುದ್ಧ ನೀರಿನ ಘಟಕಕ್ಕಾಗಿ, ಇಂದಿರಾ ಕ್ಯಾಂಟೀನ್ಗಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಶಾಶ್ವತ ಅತಿಕ್ರಮಣವಾಗಿದೆ. ಆಟದ ಮೈದಾನಗಳು ಕೆಲವು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವ್ಯರ್ಥವಾಗಿ ಬಿದ್ದಿರುವ ಖಾಲಿ ನಿವೇಶನಗಳಂತೆ ಕಾಣುತ್ತಿರಬಹುದು.