ಒಬ್ಬ ಕೋವಿಡ್ ಪಾಸಿಟಿವ್ ರೋಗಿಯಿಂದ ನೂರಾರು ಜನರಿಗೆ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಆಗ ರಾಜ್ಯದಲ್ಲಿ ಪುನಃ ಲಾಕ್ಡೌನ್ ಹೇರಬೇಕಾಗಿ ಬಂದರೆ ಮತ್ತೆ ಜನ ಅನೇಕಾನೇಕ ತೊಂದರೆಗಳಿಗೆ ಸಿಲುಕುವಂತೆ ಆಗುತ್ತದೆ. ಈಗತಾನೆ ಪುನರ್ ಚಾಲನೆಗೊಂಡಿರುವ ಉದ್ದಿಮೆಗಳು, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಸ್ಥಗಿತಗೊಳಿಸುವ ಕೆಲಸ ಮತ್ತೊಮ್ಮೆ ಆಗಬೇಕೇ? ಹೀಗಾಗದಂತೆ ಅಧಿಕಾರಿಗಳು ಪ್ರತೀ ಗಡಿಯಲ್ಲೂ ಕಠಿಣ ಕ್ರಮ ಕೈಗೊಂಡು ರಾಜ್ಯದ ಹಿತ ಕಾಯಲಿ.