‘ನನ್ನ ಜಾತಿಯೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ’ ಎಂಬ ಶ್ರೇಷ್ಠತೆಯ ವ್ಯಸನಗಳೇ ಎಲ್ಲ ಸಮಸ್ಯೆಗಳ ಮೂಲ. ಪ್ರಬಲ ಜಾತಿಯ ಜನರಿಗೆ ದುರ್ಬಲರನ್ನು ಹೊಡೆಯಲು, ಕೊಲ್ಲಲು ಯಾವುದೋ ಒಂದು ನೆವ ಸಿಕ್ಕರೆ ಸಾಕು. ಪರಿಶಿಷ್ಟ ಸಮುದಾಯದ ಮಕ್ಕಳು ಬಯಲು ಶೌಚ ಮಾಡಿದರೆಂಬ ಕಾರಣಕ್ಕೆ, ಪರಿಶಿಷ್ಟ ವಿದ್ಯಾರ್ಥಿ ಹೆಚ್ಚು ಅಂಕಗಳನ್ನು ಗಳಿಸಿದನೆಂಬ ಕಾರಣಕ್ಕೆ ಹಲ್ಲೆ, ಕೊಲೆ ಆಗಿರುವ ನಿದರ್ಶನಗಳು ಇವೆ. ಈ ಎಲ್ಲ ಸಮಸ್ಯೆಗಳ ನಿವಾರಣೆಯು ಪ್ರಬಲರು ತಮ್ಮ ಮಲಿನವಾಗಿರುವ ಮನಸ್ಸನ್ನು ಶುದ್ಧೀಕರಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ.
–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು