ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆಯಲ್ಲಿ ಕೊರೊನಾ ಕಾರಣದಿಂದ ಕಣ್ಣಿನ ವಿವಿಧ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸಿರುವುದರಿಂದ, 12 ಸಾವಿರಕ್ಕೂ ಹೆಚ್ಚು ಬಡರೋಗಿಗಳು ಶಾಶ್ವತ ಅಂಧತ್ವಕ್ಕೆ ಒಳಗಾಗುವ ಸಾಧ್ಯತೆಯು (ಪ್ರ.ವಾ., ಸೆ. 14) ಅತ್ಯಂತ ಆತಂಕಕಾರಿ. ಕೋವಿಡ್ ರೋಗಿಗಳಿಗಾಗಿ ಮೀಸಲಿರಿಸಿರುವ 100 ಹಾಸಿಗೆಗಳನ್ನು ತಕ್ಷಣವೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬಳಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಅವಕಾಶ ಮಾಡಿಕೊಡಬೇಕು. ಕಣ್ಣಿನ ರೋಗಿಗಳ ಬಗ್ಗೆ ಅಲಕ್ಷ್ಯ ತೋರದೆ ತುರ್ತು ಕ್ರಮ ಕೈಗೊಳ್ಳಬೇಕು.