ಬೀದರ್ ಜಿಲ್ಲೆಯ ಗಂಗನಬಿಡ ಎಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಶಿಕ್ಷಕರು ಬಯಲಲ್ಲೇ ಪಾಠ ಮಾಡುತ್ತಿರುವುದು ಚಿತ್ರಸಹಿತ ವರದಿಯಾಗಿದೆ (ಪ್ರ.ವಾ., ಜುಲೈ 3). ಇದು, ಗಂಗನಬಿಡ ಗ್ರಾಮದ ಸರ್ಕಾರಿ ಶಾಲೆಯ ದುಃಸ್ಥಿತಿ ಮಾತ್ರವಲ್ಲ, ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳ ಸ್ಥಿತಿ ಹೀಗೇ ಇದೆ. ಶಿಕ್ಷಣ ಕ್ಷೇತ್ರದ ಸುಸ್ಥಿತಿಯನ್ನು ಸರ್ಕಾರ ಮತ್ತು ಸಾರ್ವಜನಿಕರುಆದ್ಯತೆಯಾಗಿ ಪರಿಗಣಿಸ ಬೇಕಾಗಿತ್ತು. ಆದರೆ ನಮ್ಮಲ್ಲಿ ಅದು ಕಡೆಗಣನೆಗೆ ಒಳಗಾಗಿದೆ. ಶಾಲೆಗೆ ಸಂಬಂಧಿಸಿದ ಕೆಲವು ಮೂಲ ಸಮಸ್ಯೆಗಳನ್ನು, ಮುಖ್ಯೋಪಾಧ್ಯಾಯರು ಸಮರ್ಥರಾಗಿದ್ದರೆ ಪರಿಹರಿಸಲು ಸಾಧ್ಯ. ಆದರೆ ಶಾಲೆ ಇರುವುದು ಹಳ್ಳಿಯಲ್ಲಿ, ಮುಖ್ಯೋ ಪಾಧ್ಯಾಯರ ವಾಸ ಪಟ್ಟಣದಲ್ಲಿ ಎಂಬಂತಾಗಿದೆ. ಯಾಂತ್ರಿಕವಾಗಿ ಶಾಲೆಗೆ ಬಂದು ಹೋಗುವ ಮುಖ್ಯೋಪಾಧ್ಯಾಯ ರಿಂದ ಶಾಲೆಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.