ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಕೆಲವು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದು ಸಹಜ. ಅದಕ್ಕೆ ಅನಿರೀಕ್ಷಿತ, ಆಕಸ್ಮಿಕ, ಕ್ಷುಲ್ಲಕ ಕಾರಣ, ಕೋಪ, ಆವೇಶದಿಂದ ಮಾಡಿದ ಅಥವಾ ಮಾಡಿಲ್ಲದ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿರುವ, ಸನ್ನಡತೆಯುಳ್ಳ ಯಾರೂ ಇರಲಿಲ್ಲವೇ? ಅತ್ಯಾಚಾರ ಎಂಬುದು, ತಪ್ಪು ಎಂದು ಗೊತ್ತಿದ್ದೂ ಮಾಡುವ ಪುರುಷ ಅಹಂಕಾರದ ಅತಿಹೀನ ಹಾಗೂ ಪೈಶಾಚಿಕ ಕೃತ್ಯವಾಗಿದೆ. ಇಂತಹ ಅಪರಾಧಿಗಳನ್ನು ಹೇಗೆ ಬಿಡುಗಡೆಗೊಳಿಸಿದಿರಿ? ಇದರಿಂದ ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ?
-ಸುವರ್ಣ ಸಿ.ಡಿ.,ತರೀಕೆರೆ