ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜಭವನದ ಕಡೆಗೆ ನಿರ್ಲಕ್ಷ್ಯ ಮತ್ತು ಅತಿವೇಗದಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದ ತರುಣಿಯನ್ನು ತಡೆದು ಪೊಲೀಸರು ₹ 1,000 ದಂಡ ವಿಧಿಸಿದ್ದಾರೆ. ಈ ತರುಣಿ ಸಂಚಾರ ನಿಯಮವನ್ನು ಮೀರಿರುವುದು ಇದೇ ಮೊದಲಲ್ಲ. ಒಂಬತ್ತು ಸಾರಿ ತಪ್ಪು ಮಾಡಿದ್ದು, ಅದೂ ಸೇರಿಸಿ ಈಗ ಕಟ್ಟಿರುವ ಜುಲ್ಮಾನೆ ಹತ್ತು ಸಾವಿರ ರೂಪಾಯಿ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಮೇಲೆ ‘ನಾನು ಯಾರು ಗೊತ್ತಾ? ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ನನ್ನಲ್ಲಿ ಎಲ್ಲ ದಾಖಲೆಗಳಿವೆ, ನನ್ನನ್ನು ತಡೆದರೆ ಪರಿಣಾಮ ನೆಟ್ಟಗಿರದು’ ಎಂದು ದುಂಡಾವರ್ತಿಯಿಂದ ಆಕೆ ಪೊಲೀಸರ ಮೇಲೆ ಧಮಕಿ ಹಾಕಿದ್ದಾಳೆ. ಅವಳು ತಪ್ಪು ಎಸಗಿರುವುದಕ್ಕೆ ಅವಳ ಹಿಂದಿನ 9 ಪುರಾವೆಗಳಿವೆ.