‘ಹನುಮಂತನಂತೆ ಬೆಂಕಿ ಹಚ್ಚೋಕೂ ಬರುತ್ತೆ’ ಎಂದು ಬಿ.ಎಲ್.ಸಂತೋಷ್ ಅವರು ಹಿಂದೂ ಸಮಾಜದ ಗುತ್ತಿಗೆ ಹಿಡಿದವರಂತೆ ಗುಡುಗಿದ್ದಾರೆ (ಪ್ರ.ವಾ., ಆ. 25). ಭಾರತವು ಬಹು ಸಂಸ್ಕೃತಿಯ ನಾಡು, ದೇಶದ ಬಹುತ್ವಕ್ಕೆ ಸಡ್ಡು ಹೊಡೆದಂತೆ ‘ಅಸಂತೋಷಿ’ಗಳು ಆಗಾಗ ಧರ್ಮದ ಕಿಡಿಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.
ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಬುದ್ಧಿ ಕಲಿಸುವುದೂ ಸೌಹಾರ್ದಪ್ರಿಯರಾದ ಜನರಿಗೆ ಗೊತ್ತಿದೆ ಎಂಬುದನ್ನು ಸಂತೋಷ್ ಅವರು ಅರಿಯಲಿ. ಬಹುತ್ವದ ಭಾರತದಲ್ಲಿ ಗಂಗೆ, ಸಾಬರಮತಿ, ಕುತುಬ್ ಮಿನಾರ್, ತಾಜಮಹಲ್ ಮುಂತಾದವು ಭಾವೈಕ್ಯದ ಸಂಕೇತಗಳು.
ಇವುಗಳ ಮಧ್ಯೆ ಕಂದಕ ನಿರ್ಮಿಸಿ, ಬೆಂಕಿ ಹಚ್ಚುವವರು ಕರುಣೆ- ಶಾಂತಿಯ ಹಣತೆಗೆ ಸಿಲುಕಿದ ಪತಂಗವಾಗುವರು ಎಂಬುದನ್ನು ಅವರು ಅರಿಯುವುದು ಒಳಿತು. -ಡಾ. ರುದ್ರೇಶ್ ಅದರಂಗಿ,ಬೆಂಗಳೂರು