ಶಿರಸಿ ತಾಲ್ಲೂಕಿನಲ್ಲಿ ಪ್ರಾಣಿ ಉರುಳಿಗೆ ಸಿಲುಕಿ ಕಪ್ಪು ಚಿರತೆಯೊಂದು ಬಲಿಯಾಗಿರುವುದು (ಪ್ರ.ವಾ., ಆ. 28) ನೋವಿನ ಸಂಗತಿ. ಶಿರಸಿ ಭಾಗದಲ್ಲಿ ಮೊದಲ ಬಾರಿಗೆ ಕಾಣಸಿಕ್ಕಂತಹ ಈ ಕಪ್ಪು ಚಿರತೆ ನಿಸರ್ಗದ ಅಪರೂಪದ ಸೃಷ್ಟಿಗಳಲ್ಲೊಂದು. ಇದೇ ತೆರನಾಗಿ ಮುಂಗುಸಿ, ಕಬ್ಬೆಕ್ಕು, ಉಡ, ನರಿ, ಮೊಲ, ಮುಳ್ಳುಹಂದಿಗಳಲ್ಲದೆ ಹಲವಾರು ಪಕ್ಷಿಗಳನ್ನೂ ಬೇಟೆಗಾರರು ಯಾವುದೇ ಅಡೆತಡೆ ಇಲ್ಲದೆ ಪ್ರತಿನಿತ್ಯ ಬೇಟೆಯಾಡುತ್ತಿದ್ದಾರೆ. ಕಾನೂನಿನ ಬಗ್ಗೆ ಕಿಂಚಿತ್ತೂ ಗೌರವ, ಭಯವಿಲ್ಲದಿರುವುದು ಅವರ ಅಟ್ಟಹಾಸಕ್ಕೆ ಕಾರಣವಾಗಿದೆ.