ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪನವರು ರಾಹುಲ್ ಗಾಂಧಿ ಅವರನ್ನು ‘ಬಚ್ಚಾ’ ಅಂದರು. ಅದಕ್ಕೆ ದಿನೇಶ್ ಗುಂಡೂರಾವ್ ‘ಇದು ಯಡ್ಡಿಯವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದರು. ಕೆಲ ದಿನಗಳ ಹಿಂದೆ ಇದೇ ಗುಂಡೂರಾವ್ ಅವರು ‘ನರೇಂದ್ರ ಮೋದಿ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ’ ಎಂದು ಕಾರ್ಯಕರ್ತರಿಗೆ ಕರೆಯಿತ್ತಿದ್ದರು. ರಾಹುಲ್ ಗಾಂಧಿ ಮೋದಿಯವರನ್ನು ‘ಕಳ್ಳ’ ಎಂದರೆ, ಸಿದ್ದರಾಮಯ್ಯನವರು ‘ಮೋಸಗಾರ, ನರಭಕ್ಷಕ’ ಎನ್ನುತ್ತಾರೆ. ರೇವಣ್ಣ, ಕುಮಾರಸ್ವಾಮಿಯವರಂತೂ ಸುಮಲತಾ ಅವರ ಜನ್ಮ ಜಾಲಾಡುತ್ತಿದ್ದಾರೆ.