‘ಸಾಲ ತಂದಾದರೂ ಈ ಬಾರಿಯ ಬಜೆಟ್ನಲ್ಲಿ ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ (ಪ್ರ.ವಾ., ಜ. 27). ಸಾಲ ತಂದು ತುಪ್ಪ ತಿಂದಂತಾಯಿತು. ಸಾಲದ ಬದಲು, ಕೊರತೆಯಾಗಿರುವ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ಕೊಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಗಳ ಬಾಬತ್ತನ್ನು ನಿಷ್ಠುರವಾಗಿ ಕೇಳಿ ಪಡೆಯಬೇಕು. ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಅದುಬಿಟ್ಟು, ಹೆಚ್ಚು ಸಾಲ ಮಾಡಿ ಅದನ್ನು ಜನರ ಮೇಲೆ ಹೇರುವುದು ಸೂಕ್ತವಲ್ಲ.