ಅಷ್ಟಕ್ಕೂ ಪೊಲೀಸ್ ಅಧಿಕಾರಿಗೆ ಎಚ್ಚರಿಕೆ ನೀಡಲು ರಾಜೇಶ್ ಅವರಿಗೆ ಯಾವ ಅಧಿಕಾರವಿದೆ? ಮುಖ್ಯಮಂತ್ರಿ ಜೊತೆಗಿನ ಸಂಬಂಧವನ್ನು ಅವರು ಮನೆಯಲ್ಲಿ ಇಟ್ಟುಕೊಳ್ಳಲಿ. ಇದು ಪ್ರಜಾಪ್ರಭುತ್ವವೇ ಹೊರತು, ರಾಜಪ್ರಭುತ್ವವಲ್ಲ. ತಮಗೆ ವಿಶೇಷ ಮರ್ಯಾದೆ ಬೇಕೆಂದರೆ ಅದನ್ನು ಅವರು ಕಷ್ಟಪಟ್ಟು ಸಂಪಾದಿಸಲಿ. ಅಧಿಕಾರದಲ್ಲಿರುವ ಸಂಬಂಧಿಯ ಕೃಪೆಯಿಂದ ಅಧಿಕಾರ ಚಲಾಯಿಸಲು ಹೋಗಬಾರದು. ತಮ್ಮ ಹೆಸರು-ಸ್ಥಾನಮಾನ ಬಳಸದಂತೆ ಮುಖ್ಯಮಂತ್ರಿ ತಮ್ಮ ಎಲ್ಲ ಸಂಬಂಧಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಿ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಬಂದ ಕಾರಣಕ್ಕೆ, ರಾಜೇಶ್ ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದರ ಬಗ್ಗೆಯೂ ಚಿಂತಿಸಲಿ.