ದಾವಣಗೆರೆಯಿಂದ ಹಿರಿಯೂರು ಮಾರ್ಗದ ಕೆಎಸ್ಆರ್ಟಿಸಿ ಬಸ್ನಲ್ಲಿ ಇತ್ತೀಚೆಗೆ ಪ್ರಯಾಣಿಸಿದಾಗ ಆದ ಕೆಟ್ಟ ಅನುಭವ ಮರೆಯಲಾಗದ್ದು. ಸಾರಿಗೆ ಸಂಸ್ಥೆ ಟೈಅಪ್ ಮಾಡಿಕೊಂಡಿರುವ ಹಿರಿಯೂರು– ಮೇಟಿಕುರ್ಕೆ ಮಾರ್ಗ ಮಧ್ಯದ ಹೋಟೆಲೊಂದರ ಹತ್ತಿರ ಉಪಾಹಾರಕ್ಕೆ ಬಸ್ ಅನ್ನು ನಿಲ್ಲಿಸಲಾಗಿತ್ತು. ಹೋಟೆಲ್ನಲ್ಲಿದ್ದ ಎಲ್ಲ ಸೇವೆಗಳೂ ಪ್ರಯಾಣಿಕರಿಗೆ ಆತಿಥ್ಯ ನೀಡದೆ ಅಪಥ್ಯವಾಗುವಂತೆ ಇದ್ದವು. ದೂಳು, ಕೊಳಕು ಹೊದ್ದುಕೊಂಡಿದ್ದ ಹೋಟೆಲ್ನ ಟೇಬಲ್, ಕುರ್ಚಿಗಳಲ್ಲಿ ಊಟ ಮಾಡುವುದು ರೋಗವನ್ನೇ ಆಹ್ವಾನಿಸುವಂತಿತ್ತು. ಇನ್ನು ಅಲ್ಲಿನ ಶೌಚಾಲಯವಂತೂ ಅಕ್ಷರಶಃ ಕೊಳಕಿನ ಆಗರವಾಗಿತ್ತು.