ಜಿ.ಎಚ್.ತಿಪ್ಪಾರೆಡ್ಡಿ ಅಂತಹ ಹಿರಿಯ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ‘ಸಮಾನ ಮನಸ್ಕರು ದೂರವಾಣಿ ಸಂಪರ್ಕದಲ್ಲಿದ್ದು, ನಾಳೆ ಸಭೆ ಸೇರಲಿದ್ದೇವೆ’ ಎಂದಿದ್ದಾರೆ. ಗೂಳಿಹಟ್ಟಿ ಶೇಖರ್ ತಾವು ಬಿಜೆಪಿಗೆ ಬಂದದ್ದೇ ತಪ್ಪಾಯಿತು ಎನ್ನುವಂತೆ ಮಾತನಾಡಿದ್ದಾರೆ. ತಿಪ್ಪಾರೆಡ್ಡಿಯವರ ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದಾರೆ. ನಿಕಟಪೂರ್ವ ಮೈತ್ರಿ ಸರ್ಕಾರ ಅಸಮಾಧಾನಕ್ಕೆ ತೇಪೆ ಹಚ್ಚುತ್ತಾ ದಿನದೂಡಿ, ಕೊನೆಗೂ ಅತೃಪ್ತ ಶಾಸಕರಿಂದ ಪತನಗೊಂಡಿತು. ಹೆಚ್ಚಿನ ಶಾಸಕರ ಬಗ್ಗೆ ಜನಸಾಮಾನ್ಯರಲ್ಲಿ ಈಗಾಗಲೇ ಗೌರವ ಉಳಿದಿಲ್ಲ. ಮೈತ್ರಿ ಸರ್ಕಾರದ ಸ್ಥಿತಿ ಮರುಕಳಿಸದಿರಲಿ.