ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅಸಮಾಧಾನ: ಮೈತ್ರಿ ಸರ್ಕಾರದ ಸ್ಥಿತಿ ಮರುಕಳಿಸದಿರಲಿ!

Last Updated 20 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಶಾಸಕರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ರೇಣುಕಾಚಾರ್ಯ ಮುಂತಾದವರು ಪ್ರಮಾಣ ವಚನ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು ಎನ್ನಲಾಗಿದೆ.

ಜಿ.ಎಚ್.ತಿಪ್ಪಾರೆಡ್ಡಿ ಅಂತಹ ಹಿರಿಯ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ‘ಸಮಾನ ಮನಸ್ಕರು ದೂರವಾಣಿ ಸಂಪರ್ಕದಲ್ಲಿದ್ದು, ನಾಳೆ ಸಭೆ ಸೇರಲಿದ್ದೇವೆ’ ಎಂದಿದ್ದಾರೆ. ಗೂಳಿಹಟ್ಟಿ ಶೇಖರ್‌ ತಾವು ಬಿಜೆಪಿಗೆ ಬಂದದ್ದೇ ತಪ್ಪಾಯಿತು ಎನ್ನುವಂತೆ ಮಾತನಾಡಿದ್ದಾರೆ. ತಿಪ್ಪಾರೆಡ್ಡಿಯವರ ಬೆಂಬಲಿಗರು ಪ್ರತಿಭಟನೆಗೆ ಇಳಿದಿದ್ದಾರೆ. ನಿಕಟಪೂರ್ವ ಮೈತ್ರಿ ಸರ್ಕಾರ ಅಸಮಾಧಾನಕ್ಕೆ ತೇಪೆ ಹಚ್ಚುತ್ತಾ ದಿನದೂಡಿ, ಕೊನೆಗೂ ಅತೃಪ್ತ ಶಾಸಕರಿಂದ ಪತನಗೊಂಡಿತು. ಹೆಚ್ಚಿನ ಶಾಸಕರ ಬಗ್ಗೆ ಜನಸಾಮಾನ್ಯರಲ್ಲಿ ಈಗಾಗಲೇ ಗೌರವ ಉಳಿದಿಲ್ಲ. ಮೈತ್ರಿ ಸರ್ಕಾರದ ಸ್ಥಿತಿ ಮರುಕಳಿಸದಿರಲಿ.

ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT