ಮಹಾನ್ ದೇಶಪ್ರೇಮಿ, ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರ ಉಕ್ಕಿನ ಪ್ರತಿಮೆಯು ವಿಶ್ವದಲ್ಲಿಯೇ ಎತ್ತರದ್ದು ಎಂಬುದು ಸಂತಸದ ವಿಷಯ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ‘ರಾಷ್ಟ್ರೀಯ ಏಕತಾ ದಿನ’ವೆಂದು ಘೋಷಿಸಿ ಪ್ರತಿಮೆ ಅನಾವರಣದ ಕಾರ್ಯಕ್ರಮವನ್ನು ಬಿಜೆಪಿಯ ಸಮಾರಂಭವನ್ನಾಗಿ ಮಾಡಿ, ಪಟೇಲರ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದ್ದು ಸರಿಯಲ್ಲ.