ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ನಡೆ ಸ್ವಾಗತಾರ್ಹ, ಆದರೆ...

Last Updated 10 ಮಾರ್ಚ್ 2020, 19:32 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಸ್ಥಾನಗಳಲ್ಲಿ ಇನ್ನು ಮುಂದೆ ಅರ್ಚಕರು ಕನ್ನಡದಲ್ಲೇ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶಿಸಿದ್ದಾರೆ. ಇದೊಂದು ಸ್ವಾಗತಾರ್ಹ ಕ್ರಮ. 80ರ ದಶಕದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್ ಅವರು ಆಯ್ದ ಕೆಲವು ಮುಜರಾಯಿ ದೇವಸ್ಥಾನಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸಿದ್ದರು. ‘ಕನ್ನಡದ ಪೂಜಾರಿ’ ಎಂದೇ ಹೆಸರಾಗಿರುವ ಹಿರೇಮಗಳೂರು ಕಣ್ಣನ್, ಹಿರೇಮಗಳೂರಿನ ರಾಮದೇವರ ದೇವಸ್ಥಾನದಲ್ಲಿ ಬಹಳಷ್ಟು ವರ್ಷಗಳಿಂದ ಕನ್ನಡದಲ್ಲೇ ಮಂತ್ರಗಳನ್ನು ಪಠಿಸುತ್ತಾರೆ.

ದೇವರ ಪೂಜೆಯಲ್ಲಿ ಹೇಳಲಾಗುವ ಮಂತ್ರಗಳ ಅರ್ಥವನ್ನು ನಾವು ತಿಳಿದುಕೊಂಡರೆ, ನಮ್ಮ ಪೂಜೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂಬುದು ಒಪ್ಪತಕ್ಕ ವಿಚಾರ. ಆದರೆ ಮಂತ್ರಗಳ ಅರ್ಥ ತಿಳಿದುಕೊಳ್ಳಲು ಎಷ್ಟು ಜನ ಆಸಕ್ತರಾಗಿರುತ್ತಾರೆ?

ವಿವಿಧ ಬಗೆಯ ಚಿಂತೆಗಳನ್ನು ತಲೆಯಲ್ಲಿ ಹೊತ್ತುಕೊಂಡೇ ದೇವಸ್ಥಾನದ ಒಳಗೆ ಅಡಿಯಿಡುವ ಜನರ ನಡುವೆ, ಅರ್ಚಕರು ಹೇಳುವ ಮಂತ್ರಗಳನ್ನು ಶ್ರದ್ಧಾಭಕ್ತಿಯಿಂದ ಕೇಳಿಸಿಕೊಳ್ಳುವ ಆಸ್ತಿಕರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಅದೇನೇ ಇರಲಿ, ಜಿಲ್ಲಾಧಿಕಾರಿಯ ಈ ನೂತನ ಕ್ರಮ ಸಾರ್ಥಕವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.

–ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT