ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಮಾಮ ಯಾಕ ಸಿಟ್ಟಾದೆ?

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನಿದ್ದೆಗೆಟ್ಟು ರಾತ್ರಿ ಎಲ್ಲಾ ಎದ್ದು ಕುಂತಿದ್ನೋ ಯಪ್ಪಾ...

ನಿದ್ದೆ ಬರಲಾರ್ದಂಗೆ ಮಾಡಿಬಿಟ್ಟಿಯಲ್ಲೋ ಮಾರಾಯ

ನಾವು ಅಂತಾದ ಏನ್‌ ತಪ್ಪು ಮಾಡಿವೋ ಮಾಮ

ನಮ್ಮ ಅವ್ವನ್ನ ತವರಮನಿಗಿ ಕಳಿಸಿಲ್ಲ ಅಂತ

ಸಿಟ್ಟಾಗಿಯೇನೋ

ನಾವ್‌ ಕಳಿಸಿದ ಗಾಡಿ ಯಾಕ ತಡಿದಿಯೋ

ಈ ಕೋಪತಾಪ ಎಲ್ಲಾ ಬಿಟ್ಟಬಿಡು ಚಂದಮಾಮ

ನಾವ್‌ ಮತ್ತ ಗಾಡಿ ಕಳಸ್ತೀವಿ ಮಾರಾಯ

ನಿನಗ ಏನಾರ ಬೇಕಿತ್ತು ಅಂದ್ರ ಈಗ ಲಿಸ್ಟ್‌ ಮಾಡಿ

ಆರ್ಬಿಟರ್‌ ಕೂಡ ಸಂದೇಶ ಕಳಿಸಿಬಿಡಪ

ಹಣ ಬೇಕಿತ್ತು ಅಂದ್ರ ಸ್ವಿಸ್‌ ಬ್ಯಾಂಕಿಂದ ತಗದ್‌ಕೊಡ್ತೀವಿ

ಗಾಡಿ ಮಾತ್ರ ತಡಿಬ್ಯಾಡೋ...

-ಸದಾಶಿವ ಎಂ.,ಎಚ್‌.ಸಿದ್ಧಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT