ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2: ನಂಬಿಕೆ ವೈಯಕ್ತಿಕವಾಗಿರಲಿ

Last Updated 15 ಜುಲೈ 2019, 20:15 IST
ಅಕ್ಷರ ಗಾತ್ರ

ಡಿ.ಡಿ. ನ್ಯೂಸ್ ಬೆಳಗಿನ ಆರರ ವಾರ್ತಾ ಸಂಚಿಕೆಯನ್ನು ರದ್ದು ಮಾಡಿ, ತಿರುಪತಿ ದೇವಸ್ಥಾನಕ್ಕೆ ರಾಷ್ಟ್ರಪತಿ ಭೇಟಿ ನೀಡಿದ್ದನ್ನು ತೋರಿಸಿತು. ಅದರಲ್ಲೇ ಇಸ್ರೊ ಅಧ್ಯಕ್ಷ ಡಾ. ಕೆ.ಶಿವನ್ ಧಾರ್ಮಿಕ ಉಡುಪಿನಲ್ಲಿ ಅಲ್ಲಿಂದಲೇ ಚಂದ್ರಯಾನ-2ರ ಬಗೆಗೆ ವೈಜ್ಞಾನಿಕ ಮಾಹಿತಿ ನೀಡಿದ್ದನ್ನೂ ನೋಡಿದೆ. ಇಬ್ಬರೂ ಯಾನದ ಯಶಸ್ಸಿಗೆ ಪ್ರಾರ್ಥಿಸಿರಬಹುದು. ಆದರೆ, ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಉಡಾವಣೆ ಮುಂದಕ್ಕೆ ಹೋಯಿತು. ಬಾಲಾಜಿ ಅನುಗ್ರಹ ಇರಲಿಲ್ಲ!

ಬಿದಿಗೆ, ಚೌತಿ ಚಂದ್ರನ ದರ್ಶನ ನೋಡಿ ಹಬ್ಬ ಆಚರಿಸುವುದು ನಂಬಿಕೆ. ಆದರೆ, ಸರ್ಕಾರದ ಕಾರ್ಯಕ್ರಮದಲ್ಲಿ ಇದನ್ನು ತರುವುದು ಎಷ್ಟು ಸರಿ? ಉಪಗ್ರಹವನ್ನು ಉಡಾಯಿಸುವವರು, ಅದನ್ನು ನೋಡಲು ಹೋಗುವ ಗಣ್ಯರು ತಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಹೀಗೆ ಸಾರ್ವಜನಿಕವಾಗಿ ತೋರ್ಪಡಿಸುವುದು, ಮಾಧ್ಯಮಗಳು ಪ್ರಚಾರ ಕೊಡುವುದು ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕಾರಿ ಆಗದು.

– ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT