ಚಿಕ್ಕಬಳ್ಳಾಪುರದಂಥ ಕಾಂಗ್ರೆಸ್ ಕೋಟೆಯಲ್ಲೂ ಬಿಜೆಪಿ ಗೆದ್ದಿದೆ. ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ದೇವೇಗೌಡರು 2014ರಲ್ಲೇ ಹೇಳಿದ್ದರು. ಈಗಲಾದರೂ ಅವರು ಹಾಗೆ ನಡೆದುಕೊಳ್ಳಲಿ.
ಯಾರೂ ಯಾವ ರಂಗದಲ್ಲೂ ಅನಿವಾರ್ಯರಲ್ಲ.ಮಹಾಘಟಬಂಧನ ಪ್ರಭಾವ ಬೀರಲಿಲ್ಲ.ಹೊಸ ಸರ್ಕಾರವು ನಿರುದ್ಯೋಗ, ರೈತರ ಸಮಸ್ಯೆಗಳತ್ತ ಗಮನಹರಿಸಲಿ. ಸಣ್ಣ ಉದ್ಯಮಗಳಿಗೆ, ಜನಸಾಮಾನ್ಯರಿಗೆ ಮೊದಲ ಅವಧಿಯಲ್ಲಿ ಆಗಿರುವ ಕೊರತೆಯನ್ನು ಈ ಬಾರಿ ನೀಗಿಸಲಿ.