ಕೊಪ್ಪಳ ಜಿಲ್ಲೆಯಲ್ಲಿ ಕುರಿಗಾಹಿ ಹುಡುಗ ಹಾಗೂ ಎಂ.ಎ. ಓದುತ್ತಿರುವ ಹುಡುಗಿ ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಷಯ ಇಟ್ಟುಕೊಂಡು ಗಂಟೆಗಟ್ಟಲೆ ಚರ್ಚಿಸುವ, ‘ನಿಮ್ಮಿಬ್ಬರಲ್ಲಿ ಪ್ರೀತಿ ಹೇಗೆ ಉಂಟಾಯಿತು, ನಿನಗೆ ಕುರಿಗಾಹಿಯನ್ನು ಪ್ರೀತಿಸಲು ಮನಸ್ಸು ಹೇಗೆ
ಬಂತು’ ಎಂಬಂಥ ಬಾಲಿಶ ಪ್ರಶ್ನೆಗಳನ್ನು ದೃಶ್ಯಮಾಧ್ಯಮದಲ್ಲಿ ಕೇಳುತ್ತಿದ್ದುದನ್ನು ನೋಡಿ ಬೇಸರವಾಯಿತು.